Advertisement

ನರೇಗಾದಡಿ ಉದ್ಯೋಗ ನೀಡಿ

04:05 PM Jan 21, 2020 | Suhan S |

ಬೆಳಗಾವಿ: ನರೇಗಾ ಯೋಜನೆಯಡಿ ನಮಗೆ ಉದ್ಯೋಗ ನೀಡಬೇಕು ಎಂದು ಅರ್ಜಿ ಸಲ್ಲಿಸಿದರೂ ಅಂಬೇವಾಡಿ ಗ್ರಾಮ ಪಂಚಾಯತ್‌ ಅಧಿಕಾರಿಗಳು ಕೆಲಸ ನೀಡುತ್ತಿಲ್ಲ ಎಂದು ದೂರಿ ಬೆಳಗಾವಿ ತಾಲೂಕಿನ ಮಣ್ಣೂರು ಗ್ರಾಮಸ್ಥರು ಸೋಮವಾರ ತಾಲೂಕು ಪಂಚಾಯತ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ನಮಗೆ ಕೆಲಸದ ಅಗತ್ಯವಿದೆ. ಆದರೆ ಅಧಿಕಾರಿಗಳಿಂದ ಸಹಕಾರ ಸಿಗುತ್ತಿಲ್ಲ. ಕಳೆದ ಡಿಸೆಂಬರ್‌ ತಿಂಗಳಿಂದ ನಾವು ನರೇಗಾ ಯೋಜನೆಯಡಿ ಕೆಲಸ ನೀಡುವಂತೆ ಅಂಬೇವಾಡಿ ಗ್ರಾಮ ಪಂಚಾಯತ್‌ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದೇವೆ. ಇದುವರೆಗೆ ನಮ್ಮ ಅರ್ಜಿ ಪರಿಶೀಲನೆ ಮಾಡಿಲ್ಲ ಹಾಗೂ ನಮಗೆ ಉದ್ಯೋಗಾವಕಾಶ ಸಹ ನೀಡಿಲ್ಲ ಎಂದು ದೂರಿದರು.

ಅರ್ಜಿಗಳ ಬಗ್ಗೆ ವಿಚಾರಿಸಲು ಹೋದರೆ ಅಧಿಕಾರಿಗಳಿಂದ ಬೇಜವಾಬ್ದಾರಿ ಉತ್ತರ ಬರುತ್ತಿದೆ. ಕಾರಣ ಕೂಡಲೇ ನಮ್ಮಅರ್ಜಿಗಳನ್ನು ಪರಿಶೀಲಿಸಿ ಉದ್ಯೋಗ ನೀಡಬೇಕು ಎಂದು ಗ್ರಾಮದ ಎಲ್‌.ವಿ. ಹೊಂಗೇಕರ, ಎಲ್‌.ಎಸ್‌. ಕದಮ್‌, ಆರ್‌.ಬಿ. ಪಾಟೀಲ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next