Advertisement

ಪುತ್ರನ ಬಗ್ಗೆ ಹೆಮ್ಮೆಯಿದೆ; ಸುರಕ್ಷಿತವಾಗಿ ಮರಳುವ ವಿಶ್ವಾಸವಿದೆ

12:30 AM Mar 01, 2019 | |

ಪುತ್ರ ಅಭಿನಂದನ್‌ ಬಗ್ಗೆ ನನಗೆ ಹೆಮ್ಮೆಯಿದೆ. ಆತ ಸುರಕ್ಷಿತವಾಗಿ ಮನೆಗೆ ಮರಳುತ್ತಾನೆ ಎಂಬ ವಿಶ್ವಾಸವಿದೆ ಎಂದು ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ತಂದೆ ನಿವೃತ್ತ ಏರ್‌ ಮಾರ್ಷಲ್‌ ಎಸ್‌ ವರ್ಧಮಾನ್‌ ಹೇಳಿದ್ದಾರೆ. 

Advertisement

ವರ್ಧಮಾನ್‌ರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವ ಬಗ್ಗೆ ಪ್ರಾರ್ಥನೆ ಮಾಡಿದ ದೇಶದ ಜನರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಸೆರೆಯಲ್ಲಿದ್ದರೂ ವಿಡಿಯೋದಲ್ಲಿ ಯೋಧ ನಂತೆಯೇ ಮಾತನಾಡಿದ್ದಾರೆ. ನೆರೆ ದೇಶದಲ್ಲಿ ಅಭಿನಂದನ್‌ಗೆ ಚಿತ್ರ ಹಿಂಸೆ ನೀಡುವುದಿಲ್ಲವೆಂಬ ವಿಶ್ವಾಸವಿದೆ ಎಂದೂ ಅವರು ಹೇಳಿದ್ದಾರೆ. 

ಬುಧವಾರ ಪಾಕಿಸ್ಥಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವಲ್ಲಿ ಶ್ರಮಿಸಿದ ಅಭಿನಂದನ್‌ ವರ್ಧಮಾನ್‌ರ ಮಿಗ್‌ 21 ವಿಮಾನ ಪತನಗೊಂಡಿದ್ದರಿಂದ, ಅವರು ಪಾಕಿಸ್ಥಾನದ ಯೋಧರ ಕೈಗೆ ಸಿಕ್ಕಿಬಿದ್ದಿದ್ದರು. ಅಭಿನಂದನ್‌ ತಂದೆ ಕೂಡ ವಾಯುಪಡೆಯಲ್ಲಿ ಕಾರ್ಯನಿರ್ವಹಿಸಿದ್ದು, ಈಗ ತಮಿಳುನಾಡಿನಲ್ಲಿ ವಾಸಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅವರು ಹಲವು ವರ್ಷಗಳವರೆಗೆ ಬೆಂಗಳೂರಿನಲ್ಲೂ ವಾಯುಪಡೆಯ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next