Advertisement

ನಿರ್ಬಂಧ ಮುಂದುವರಿದರೆ ಮಾಧ್ಯಮಗಳ ಜೊತೆ ಪ್ರತಿಭಟನೆ: ದೇವೇಗೌಡ

09:56 AM Oct 14, 2019 | keerthan |

ಬೆಂಗಳೂರು: ಸರ್ಕಾರ ಕಾರ್ಯಕ್ರಮಗಳಿಗೆ ಮಾಧ್ಯಮದವರಿಗೆ ನಿರ್ಬಂಧ ಪ್ರಕರಣವನ್ನು  ನಾನು ತೀವ್ರ ಖಂಡಿಸುತ್ತೇನೆ. ಮುಖ್ಯಮಂತ್ರಿಯವರಿಗೆ ಈ ಬಗ್ಗೆ ಪತ್ರ ಬರೆಯುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ, ದೇವೆಗೌಡ ಹೇಳಿದ್ದಾರೆ.

Advertisement

ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಮಾಜಿ ಪ್ರಧಾನಿಯವರು, ಮಾಧ್ಯಮದವರ ಮೇಲಿನ ನಿರ್ಭಂಧ ಇದೇ ರೀತಿ ಮುಂದುವರೆದರೆ ನಾನು ಮಾಧ್ಯಮಗಳ ಜತೆ ಪ್ರತಿಭಟನೆ ನಡೆಸುವ ತೀರ್ಮಾನ ಮಾಡುತ್ತೇನೆ. ಸ್ಪೀಕರ್ ನಿರ್ಬಂಧ ಹೇರಿದ್ದಾರೆ ಅಂತಾರೆ ಈಗ ನೋಡಿದರೆ ಸರ್ಕಾರ ಕಾರ್ಯಕ್ರಮಗಳಿಗೂ ನಿರ್ಬಂಧ ಹೇರಿದ್ದಾರೆ . ಮಾಧ್ಯಮದವರ ಜೊತೆ ನಾನು ಸದಾ ಇದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next