Advertisement

ಸರ್ಕಾರಿ ಔಷಧ ವಿತರಕರ ಪ್ರತಿಭಟನೆ

05:46 PM Jan 03, 2020 | Team Udayavani |

ಶಿರಸಿ: ರಾಜ್ಯ ಸರ್ಕಾರಿ ಫಾರ್ಮಸಿಸ್ಟ್‌ ಸಂಘವು ನ್ಯಾಯಯುತ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ರಾಜ್ಯಾದ್ಯಂತ ಜ.2ರಿಂದ 5 ಹಂತಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಶಿರಸಿಲಿ ಕೂಡ ಮನವಿ ಸಲ್ಲಿಸಲಾಯಿತು.

Advertisement

ಜಿಲ್ಲಾ ಔಷಧ ಉಗ್ರಾಣದಿಂದ ಕಾಲ್ನಡಿಗೆ ಮೂಲಕ ಆಗಮಿಸಿ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ, ಅಖೀಲ ಭಾರತೀಯ ತಾಂತ್ರಿಕ ಪರಿಷತ್ತಿನಿಂದ 1987 ರಲ್ಲಿ ಫಾರ್ಮಸಿಯನ್ನು ತಾಂತ್ರಿಕ ವಿದ್ಯಾರ್ಹತೆಯೆಂದು ಪರಿಗಣಿಸಿ ಆದೇಶಿಸಿರುವುದರಿಂದ ಡಿಪ್ಲೋಮಾ ವೇತನ ಭತ್ಯೆ ನೀಡುವುದು, ಕೇಂದ್ರ ಹಾಗೂ ನೆರೆ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫಾರ್ಮಸಿಸ್ಟ್‌ಗಳಿಗಿಂತ ಕಡಿಮೆ ವೇತನ ಹಾಗೂ ಭತ್ಯೆಯನ್ನು 1982 ರಿಂದ ಪಡೆಯುತ್ತಲಿದ್ದು ಈ ಅನ್ಯಾಯವನ್ನು ಸರಿಪಡಿಸುವುದು, ಸೇವಾ ಅವಧಿಯಲ್ಲಿ ಒಮ್ಮೆ ಮಾತ್ರ 10 ವರ್ಷಗಳ ಕಾಲಮಿತಿ ವೇತನ ಮುಂಬಡ್ತಿ ಪಡೆದ ನಂತರ ಯಾವುದೇ ವೇತನ ಶ್ರೇಣಿ ಬದಲಾವಣೆ ಆಗದೆ ಇರುವುದರಿಂದ ಕರ್ನಾಟಕ ಆಡಳಿತ ನ್ಯಾಯಮಂಡಳಿ ತೀರ್ಪಿನಂತೆ ವೇತನ ಜಾರಿ ಮಾಡುವುದು, ಜನಸಂಖ್ಯೆ ಆಧಾರದ ಮೇಲೆ ಹಾಗೂ ಆಸ್ಪತ್ರೆಗಳ ಹಾಸಿಗೆಗಳ ಸಾಮರ್ಥ್ಯದ ಮೇರೆಗೆ ಹೆಚ್ಚಿನ ಹುದ್ದೆ ಸೃಜಿಸುವುದು, 1965 ರ ವೃಂದ ಮತ್ತು ನೇಮಕಾತಿಯನ್ನು ಈಗೀರುವ ವಿದ್ಯಾರ್ಹತೆಗೆ ಅನುಗುಣವಾಗಿ ಬದಲಾಯಿಸಿ ಬಡ್ತಿ ಅವಕಾಶ ಹೆಚ್ಚಿಸುವುದು, ಸೇವಾ ನಿರತ ಫಾರ್ಮಸಿಸ್ಟ್‌ಗಳಿಗೆ ಉನ್ನತ ವ್ಯಾಸಂಗಕ್ಕೆ ಸೀಟು ಕಾಯ್ದಿರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು, ಕಾಲಕಾಲಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗುವ ಹೊಸ ಔಷಧಿಗಳ ಕುರಿತು ತಿಳಿದುಕೊಳ್ಳಲು ಪುನರ್‌ ಮನನ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು ಎಂದು ಮನವಿ ಮಾಡಲಾಯಿತು.

ಔಷಧಿಗಳ ಸಾಮರ್ಥ್ಯ ಕಾಪಾಡಿಕೊಳ್ಳಲು ಎಲ್ಲಾ ಆಸ್ಪತ್ರೆಗಳಲ್ಲಿಯೂ ವೈಜ್ಞಾನಿಕವಾಗಿ ಔಷಧಿ ಉಗ್ರಾಣ ಅಭಿವೃದ್ಧಿಪಡಿಸುವುದು, ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಔಷಧಿಗಳ ಮಾಹಿತಿ ಕೇಂದ್ರ ಮತ್ತು ಸಮಾಲೋಚನಾ ಕೇಂದ್ರಗಳನ್ನು ಪ್ರಾರಂಭಿಸುವುದು, ಪದವಿಧರ ಫಾರ್ಮಸಿಸ್ಟ್‌ ಹುದ್ದೆಗೆ ಔಷಧ ನಿಯಂತ್ರಣ ಇಲಾಖೆಯಿಂದ ಅನ್ಯಪರ ಸೇವೆಯ ಮೇರೆಗೆ ನಿಯೋಜಿಸುತ್ತಿರುವ ಕಿರಿಯ ವೈಜ್ಞಾನಿಕ ಅಧಿಕಾರಿಗಳ ನೇಮಕ ನಿಲ್ಲಿಸಿ ಇಲಾಖೆಯಲ್ಲಿ ಪದವಿ ಪಡೆದ ಹಿರಿಯ ಫಾರ್ಮಸಿಸ್ಟ್‌ರಿಗೆ ಪದೋನ್ನತಿ ನೀಡುವುದು, ಫಾರ್ಮಸಿ ಕಾಯ್ದೆಯಂತೆ ಫಾರ್ಮಸಿಸ್ಟ್‌ರಲ್ಲದವರು ಔಷಧಿಗಳನ್ನು ವಿತರಿಸಲು ಅವಕಾಶ ಇಲ್ಲದೇ ಇರುವುದರಿಂದ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನನ್ನು ಭರ್ತಿ ಮಾಡುವುದು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಫಾರ್ಮಕೋ ವಿಜಿಲೆನ್ಸ್‌ ಪ್ರಾರಂಭಿಸುವುದು, ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಫಾರ್ಮಸಿಸ್ಟ್‌ರಿಗೆ ಕನಿಷ್ಠ ಮೂಲ ವೇತನ ನೀಡುವುದು ಮತ್ತು ಖಾಯಂ ಮಾಡುವುದು, ಆಹಾರ ಸುರಕ್ಷತಾ ಇಲಾಖೆಯಲ್ಲಿ ಬೇರೆ ರಾಜ್ಯಗಳಲ್ಲಿರುವಂತೆ ಫಾರ್ಮಸಿಸ್ಟ್‌ಗಳನ್ನು ನೇಮಕಾತಿ ಮಾಡುವುದು. ಮುಂತಾದ ಬೇಡಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಎಸ್‌.ವಿ. ಭಟ್‌, ಪ್ರಧಾನ ಕಾರ್ಯದರ್ಶಿ ಅಮಿತ ಆಮಠೆ, ಕೋಶಾಧ್ಯಕ್ಷ ಶೈಲೇಶ ಹೆಗಡೆ ಹಾಗೂ ಸಂಘದ ಇನ್ನಿತರ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿಮನವಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next