Advertisement

ವರ್ಗಾವಣೆ-ವಜಾ ನಿರ್ಧಾರ ಕೈಬಿಡಿ

03:08 PM Apr 14, 2021 | Team Udayavani |

ಹುನಗುಂದ: ಸಾರಿಗೆ ನೌಕರರ ಬೇಡಿಕೆ ಈಡೇರಿಕೆ, ಮುಷ್ಕರ ನಿರತ ನೌಕರರ ಮೇಲೆ ಸರ್ಕಾರವರ್ಗಾವಣೆ, ವಜಾ ಹಾಗೂ ಮನೆ ಬಿಡುವಂತೆನೋಟಿಸ್‌ ಜಾರಿ ಮಾಡಿರುವ ಸರ್ಕಾರ ನಿರ್ಧಾರಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಾರಿಗೆನೌಕರರ ಕೂಟ ವತಿಯಿಂದ ಸಾರಿಗೆ ನೌಕರರಕುಟುಂಬಸ್ಥರು ತಟ್ಟೆ-ಲೋಟ ಬಾರಿಸುವಮೂಲಕ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಡಿ.ಜಿ.ಮಹಾತ ಅವರಿಗೆ ಮನವಿ ಸಲ್ಲಿಸಿದರು.

Advertisement

ಸೋಮವಾರ ಪಟ್ಟಣದ ಬಸವ ಮಂಟಪದಿಂದ ಸಾರಿಗೆ ನೌಕರರು, ನೌಕರರ ಕುಟುಂಬದ ಸದಸ್ಯರುಹಾಗೂ ರೈತಪರ ಸಂಘಟನೆಗಳ ಕಾರ್ಯಕರ್ತರುತಟ್ಟೆ ಲೋಟ ಬಾರಿಸುತ್ತಾ ತಹಶೀಲ್ದಾರ್‌ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಸರ್ಕಾರ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಂಚನದಿಗಳ ರಾಜ್ಯಾಧ್ಯಕ್ಷ ಅಮರೇಶ ನಾಗೂರ ಮಾತನಾಡಿ, ಸಾರಿಗೆ ನೌಕರರಿಗೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ನಡೆದುಕೊಂಡಿಲ್ಲ. ಕೆಎಸ್‌ ಆರ್‌ಟಿಸಿ ನೌಕರರಿಗೆ ನೀಡುವ ವೇತನ ಸಾಕಾಗುತ್ತಿಲ್ಲ ಎಂದರು ಆರೋಪಿಸಿದರು.

ಹುನಗುಂದ ಡೀಪೋ ಮ್ಯಾನೇಜರ್‌ ಚಿತ್ತವಾಡಗಿಕಾರ್ಮಿಕರ ಪರವಾಗಿ ಕೆಲಸ ಮಾಡಿ, ಇಲ್ಲದಿದ್ದರೇಮುಂದಿನ ದಿನಗಳಲ್ಲಿ ನಿಮ್ಮ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಾರಿಗೆ ನೌಕರರಬೇಡಿಕೆ ಈಡೇರಿಸಲುಮುಖ್ಯಮಂತ್ರಿ ಯಡಿಯೂರಪ್ಪ ಹಾಗೂಸಾರಿಗೆ ಸಚಿವ ಲಕ್ಷ್ಮಣ ಸವದಿ ಮೀನಮೇಷಎನ್ನಿಸುತ್ತಿರುವುದು ಏಕೆ? ಕೇಂದ್ರ ಮತ್ತು ರಾಜ್ಯಸರ್ಕಾರಗಳು ಈ ದೇಶದ ಕೂಲಿ ಕಾರ್ಮಿಕರ, ರೈತ ವಿರೋಧಿ  ಧೋರಣೆ ತಾಳಿ ಅವರನ್ನು ಮತ್ತುಅವರ ಕುಟುಂಬವನ್ನು ಬೀದಿಗೀಳಿಯುವಂತೆ ಮಾಡಿದೆ. ರಾಜ್ಯದ 27 ಇಲಾಖೆಯಲ್ಲಿಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗಿದೆ. ಎಲ್ಲರೂ ಒಂದಾಗಿಬೀದಿಗಿಳಿಯುವುದಕ್ಕಿಂತ ಮುಂಚೆ ಸಾರಿಗೆನೌಕರರ 9 ಬೇಡಿಕೆಗಳ ಜತೆ 6ನೆಯ ವೇತನ ತಕ್ಷಣವೇ ಜಾರಿ ಮಾಡುವಂತೆ ಒತ್ತಾಯಿಸಿದರು.

Advertisement

ಸಾರಿಗೆ ನೌಕರರ ಕುಟುಂಬಸ್ಥೆ ಬಸಮ್ಮ ಮುರಡಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ನಿರ್ವಹಣೆ ಬದಿಗೊತ್ತಿ ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ಕೆಲಸ ಮಾಡಿದರೂ ಸಹ ಅವರಮೇಲೆ ಕೇಸ್‌ ಹಾಕಲಾಗುತ್ತಿದೆ. ಸಂಬಳಹೆಚ್ಚಿಸುವಂತೆ ಮುಷ್ಕರ ನಡೆಸುತ್ತಿದ್ದರೇ, ಸರ್ಕಾರ ನೌಕರರ ಮೇಲೆ ಹೆದರಿಕೆ ಹಾಕುವುದು ಸರಿಯಲ್ಲ ಎಂದು ಆರೋಪಿಸಿದರು.

ರೈತರ ಮುಖಂಡರಾದ ಬಸವರಾಜ ಪೈಲ, ರಸೂಲಸಾಬ ತಹಶೀಲ್ದಾರ್‌, ಸಾರಿಗೆ ನೌಕರರಾದಮಲ್ಲನಗೌಡ ದೇವರಡ್ಡಿ, ರಾಘವೇಂದ್ರತಾಳಿಕೋಟಿ, ಸುರೇಶ ಜಗ್ಗಲ, ಎಸ್‌.ವಿ.ಹಾದಿಮನಿ, ಜಿ.ಎಸ್‌.ಪಾಟೀಲ, ಕೆ.ಐ.ಸಜ್ಜನ,ಎಸ್‌.ಎಸ್‌. ಕೆಸರಬಾವಿ, ಎಸ್‌.ಆರ್‌. ಗೌಡರ,ಎ.ಎಸ್‌. ಗಡ್ಡಿ, ಎನ್‌.ಎಸ್‌. ನಾಗರಾಳ, ಮುನುಜಾ ಖಾಜಿ, ನೌಕರರ ಕುಟುಂಬಸ್ಥರಾದನಿರ್ಮಲ ಗೌಡರ, ವಿಜಯಲಕ್ಷ್ಮೀ ಪಲ್ಲೇದ,ರೇಣುಕಾ ನಾಗರಾಳ, ಮಹಾದೇವಿ ಗೌಡರ,ಶರಣಮ್ಮ ಗೌಡರ, ಸಂಗೀತಾ ಹೊಸೂರ,ಲಕ್ಷ್ಮೀ ದೇವರಡ್ಡಿ, ಶೋಭಾ ನಾಗರಾಳ,ಸುವರ್ಣ ತಾಳಿಕೋಟಿ, ಲಕ್ಷ್ಮಿಬಾಯಿ ಕಟ್ಟಿಮನಿ,ಶಾಂತಮ್ಮ ಮಾನಬಾವಿ, ಚಂದ್ರಕಲಾ ಐಹೊಳೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next