Advertisement

ಕಿರಿಯ ವೈದ್ಯರ ಪ್ರತಿಭಟನೆ

11:20 AM Oct 22, 2019 | Team Udayavani |

ದಾವಣಗೆರೆ: ಕರ್ತವ್ಯ ನಿರತ ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ಜಿಲ್ಲಾ ಚಿಗಟೇರಿ ಆಸ್ಪತ್ರೆ ಎದುರು ಕಿರಿಯ ವೈದ್ಯರು ಪ್ರತಿಭಟನೆ ನಡೆಸಿದರು.

Advertisement

ಕಳೆದ ಶನಿವಾರ ಡಾ| ರಾಚಪ್ಪ ಎಂಬುವರ ಮೇಲೆ ದಾವಣಗೆರೆಯ ವಿಜಯ್‌ ಮತ್ತವರ ಗೆಳೆಯ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಸಂಬಂಧಿತರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಡಾ| ರಾಚಪ್ಪ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸಂತೋಷ್‌ ಎಂಬಾತ ಚಿಕಿತ್ಸೆಗೆ ಬಂದಿದ್ದಾರೆ.

ಓಪಿಡಿ ಕಾರ್ಡ್‌ ಮಾಡಿಸಿಕೊಂಡು ಬರುವಂತೆ ಡಾ| ರಾಚಪ್ಪ ತಿಳಿಸಿದ್ದಾರೆ. ಕೆಲ ಹೊತ್ತಿನ ನಂತರ ಬಂದಂತಹ ಸಂತೋಷ್‌ ಇತರರು ಓಪಿಡಿ ಕಾರ್ಡ್‌ ಕೊಡುವಂತೆ ಒತ್ತಾಯಿಸಿದ್ದಾರೆ. ನನ್ನ ಬಳಿ ನಿಮ್ಮ ಓಪಿಡಿ ಕಾರ್ಡ್‌ ಇಲ್ಲ ಎಂಬುದಾಗಿ ಡಾ| ರಾಚಪ್ಪ ಎಷ್ಟೇ ಹೇಳಿದರೂ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಜೊತೆಗೆ ಅಗತ್ಯ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next