Advertisement

ಮದ್ಯದಂಗಡಿ ವಿರೋಧಿಸಿ ಪ್ರತಿಭಟನಾ ಮೆರವಣಿಗ

10:30 AM Jan 23, 2018 | |

ಕಲಬುರಗಿ: ರಾಮಮಂದಿರದ ಎದುರಿರುವ ಮದ್ಯದಂಗಡಿ ಹಾಗೂ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಡಾ| ಬಾಬು ಜಗಜೀವನರಾಂ ಪುತ್ಥಳಿ ಹತ್ತಿರದ ಬಾರ್‌ನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಅಬಕಾರಿ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಜ.8ರಂದು ಹೋರಾಟ ರೂಪಿಸಿದಾಗ ಒಂದು ಮದ್ಯದಂಗಡಿ ಸ್ಥಗಿತಗೊಳಿಸಿ ಮತ್ತೂಂದು ಮದ್ಯದಂಗಡಿ ಬಂದ್‌ಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಆದರೂ ಬಂದ್‌ ಮಾಡಿದ ಮದ್ಯದಂಗಡಿ ಮತ್ತೆ ಸಂಜೆ ಆರಂಭವಾಗಿತ್ತು. ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತೆ ಕಾಲಾವಕಾಶ ಕೋರಿದ್ದು ಸರಿಯಲ್ಲ ಎಂದರು.
 
ರಾಮಮಂದಿರ ಬಳಿ 100 ಮೀಟರ್‌ ವ್ಯಾಪ್ತಿಯಲ್ಲಿ ಮದ್ಯದಂಗಡಿಯಿರುವುದು ಕಾನೂನು ಬಾಹಿರವಾಗಿದೆ. ಸೂಕ್ತ ಕ್ರಮದ ಭರವಸೆ ನೀಡಲಾಗಿತ್ತು. ಆದರೂ ಈಗ ಮದ್ಯದಂಗಡಿ ಮತ್ತೆ ಆರಂಭಿಸಲು ಅನುಮತಿ ನೀಡಲಾಗಿದೆ. ಅದೇ ರೀತಿ ಉದ್ಯಾನವನ ಬಳಿ ನೋಟಿಸ್‌ ಜಾರಿ ಮಾಡುವುದಾಗಿ ನೀಡಿದ ಭರವಸೆ ಹುಸಿಯಾಗಿದೆ. ಕೂಡಲೇ ಕಾನೂನು ಕ್ರಮದ ಮೂಲಕ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿದರು. 

ಶ್ರೀರಾಮ ಸೇನೆ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಶ್ರೀರಾಮ ಟ್ರಸ್ಟ್‌ನ ಮೃತ್ಯುಂಜಯ, ನ್ಯಾಯವಾದಿ ಮಧುಕರ ನಾಯಕ, ವಿಶ್ವಹಿಂದೂ ಪರಿಷತ್‌ನ ಸಂತೋಷ, ಜೈ ಕರ್ನಾಟಕ ಸಂಘಟನೆಯ ಮಲ್ಲಿಕಾರ್ಜುನ ಸಾರವಾಡ, ಪ್ರಹ್ಲಾದ ಮಠವಾರಿ, ಚಂದ್ರಕಾಂತ ಕೋಳಕಾರ, ಸುಭಾಷ ಕಾಂಬಳೆ, ಗುರುಶಾಂತ ಟೆಂಗಳಿ, ಮಹೇಶ ಗೊಡಬೋಲೆ ಹಾಗೂ ಮಹಿಳೆಯರು ಪ್ರತಿಭಟನಾ ಮೆರವಣಿಗೆಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next