Advertisement
ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ,ಮುಖ್ಯಮಂತ್ರಿ ಯಡಿಯೂರಪ್ಪಬಜೆಟ್ನಲ್ಲಿ ಮೇಲ್ವರ್ಗದ ಎಲ್ಲ ನಿಗಮಮಂಡಳಿ ಮತ್ತು ಮಠ ಮಂದಿರಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ.ಆದರೆ 3 ನೂರಕ್ಕೂ ಹೆಚ್ಚು ಜಾತಿಒಳಗೊಂಡಿರುವ ಪರಿಶಿಷ್ಟ ಜಾತಿ,ಪಂಗಡ ಮತ್ತು ಹಿಂದುಳಿದ ವರ್ಗಗಳ12 ನಿಗಮ ಮಂಡಳಿ ಸೇರಿಸಿ ಕೇವಲ500 ಕೋಟಿ ನೀಡಿ ಪರಿಶಿಷ್ಟ ಮತ್ತುಹಿಂದುಳಿದವರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
Related Articles
Advertisement
ವಕೀಲರ ಸಂಘ ರಚನೆ ಕುರಿತು ಹೇಳಿಕೆ ನೀಡಿಲ್ಲ: ಎಪಿಪಿ ಸ್ಪಷ್ಟನೆ :
ಸುರಪುರ: ರಾಜ್ಯ ಪರಿಷತ್ನಿಂದ ಅಧಿಕೃತವಾಗಿ ಒಂದು ಸಂಘಇರುವಾಗ ವಕೀಲರು ಇನ್ನೊಂದುಸಂಘ ರಚನೆ ಮಾಡಿಕೊಂಡಿರುವುದು ಸರಿಯಲ್ಲ. ಕರ್ತವ್ಯ ನಿರ್ವಹಿಸುವನ್ಯಾಯಾಧೀಶರಿಗೂ ಇದು ಇರಿಸುಮುರಿಸು ಉಂಟು ಮಾಡುತ್ತದೆ ಎಂಬ ವರದಿ ಮಾ.19ರ ಪತ್ರಿಕೆಯಲ್ಲಿ ನನ್ನಹೆ ಸರಿನಿಂದಪ್ರಕಟವಾಗಿದೆ. ನಾನು ಆ ರೀತಿ ಹೇಳಿಕೆ ನೀಡಿಲ್ಲ. ಈ ಹೇಳಿಕೆಗೂ ಮತ್ತು ಸಂಘಕ್ಕೂ ಯಾವುದೇಸಂಬಂಧವಿಲ್ಲ ಎಂದು ಸರಕಾರಿ ಸಹಾಯಕ ಅಭಿಯೋಜಕ (ಎಪಿಪಿ) ರಾಘವೇಂದ್ರರಾವ್ ಜಹಾಗೀರದಾರ ಸ್ಪಷ್ಟನೆ ನೀಡಿದ್ದಾರೆ.
ವಕೀಲರ ಸಂಘದ ಕಾರ್ಯಾಲಯದಲ್ಲಿ ಅಂದು ನೂತನ ಎಜಿಪಿನಂದನಗೌಡ ಪಾಟೀಲ ಮತ್ತು ನನಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ವಕೀಲರಿಂದ ಸನ್ಮಾನ ಸ್ವೀಕರಿಸಿದ್ದೆ. ಆದರೆ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.ಸಂಘ ರಚನೆ ಕೈ ಬಿಟ್ಟು ಎಲ್ಲರೂ ಒಂದೇ ಸಂಘದಲ್ಲಿ ಮುಂದುವರಿಯುವಂತೆ ಯಾವುದೇ ರೀತಿಯ ಸಲಹೆ ನೀಡಿಲ್ಲ. ಸರಕಾರಿ ವಕೀಲನಾಗಿ ಕರ್ತವ್ಯಕ್ಕೆನಿಯುಕ್ತಿಗೊಂಡಿದ್ದೇನೆ. ವಕೀಲರ ಸಂಘಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.