Advertisement

ಯಲ್ಲಾಪುರ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಜನಾಂದೋಲನ

03:07 PM Oct 30, 2019 | Team Udayavani |

ಯಲ್ಲಾಪುರ: ಎಲ್ಲ ರೀತಿಯಲ್ಲೂ ಅಭಿವೃದ್ಧಿ ವಂಚಿತವಾಗಿರುವ ಯಲ್ಲಾಪುರವನ್ನು ಜಿಲ್ಲಾ ಕೇಂದ್ರ ಮಾಡುವ ದೃಷ್ಟಿಯಲ್ಲಿ ಎಲ್ಲ ಜಾತಿ ಸಮುದಾಯದ ಮುಖಂಡರು, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು ಕೈಜೋಡಿಸಬೇಕಿದೆ. ಇದರಲ್ಲಿ ಯಲ್ಲಾಪುರ ಅಭಿವೃದ್ಧಿಯ ಸ್ವಾರ್ಥ ಅಡಗಿದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದರು. ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾಗಿದ್ದ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಜನಾಂದೋಲನ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಈ ಸಂದರ್ಭದಲ್ಲಿ ಆಂದೋಲನದ ಚಿಹ್ನೆ ಮತ್ತು ಸ್ಟಿಕರ್‌ ಪ್ರತಿಯನ್ನು ಬಿಡುಗಡೆ ಮಾಡಲಾಯಿತು. ಯಲ್ಲಾಪುರ ಅಭಿವೃದ್ಧಿಗಾಗಿ ಈ ಆಂದೋಲನ ಅತ್ಯಗತ್ಯವಾಗಿದೆ ಎಂಬುದರ ಬಗ್ಗೆ ನಿವೃತ್ತ ತಹಶೀಲ್ದಾರ್‌ ತುಳಸಿ ಪಾಲೇಕರ, ಹಿರಿಯರಾದ ಗಜಾನನ ನಾಯ್ಕ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಚರ್ಚಿಸಿದರು

Advertisement

Udayavani is now on Telegram. Click here to join our channel and stay updated with the latest news.

Next