Advertisement

ಗ್ರಾಮಕ್ಕೆ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಆಂಜನೇಯ ಕ್ಯಾಂಪ್ ನಿವಾಸಿಗಳಿಂದ ಪ್ರತಿಭಟನೆ

05:58 PM Jul 08, 2020 | sudhir |

ಗಂಗಾವತಿ: ಗ್ರಾಮಕ್ಕೆ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ತಾಲೂಕಿನ ಆಂಜನೇಯ ಡಗ್ಗಿ ಕ್ಯಾಂಪ್ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ನಾಗೇಶ್ವರರಾವ್,ಅಶೋಕ ಲೆನಿನ್ ಮಾತನಾಡಿ, ಕಳೆದ 50 ವರ್ಷಗಳಿಂದ ಸುಮಾರು 15 ಕುಟುಂಬಗಳು ಇಲ್ಲಿ ಕೃಷಿ ಕೆಲಸ ಮಾಡುತ್ತ ವಾಸ ಮಾಡುತ್ತಿದ್ದು ಇಲ್ಲಿಯ ಕಚ್ಚಾ ರಸ್ತೆ ಮೂಲಕ ನಡೆದಾಡಲಾಗುತ್ತಿತ್ತು. ಕಳೆದ ಹಲವು ವರ್ಷಗಳಿಂದ ಭೂಮಾಲೀಕರು ಇಲ್ಲಿ ರಸ್ತೆ ಇಲ್ಲ ನಡೆದಾಡಬೇಡಿ ಎಂದು ಆಕ್ಷೇಪ ಮಾಡುತ್ತಿದ್ದು ಇನ್ನಿಲ್ಲದ ಕಿರಿಕಿರಿ ಮಾಡುತ್ತಿದ್ದಾರೆ.

ಕ್ಯಾಂಪ್ ನಲ್ಲಿ 50 ಕ್ಕೂ ಹೆಚ್ಚು ಮಕ್ಕಳು ಪ್ರತಿ ದಿನ ಶ್ರೀರಾಮನಗರ,ಮುಸ್ಟೂರು,ಕಾರಟಗಿ ಮತ್ತು ಗಂಗಾವತಿ ಹೋಗಬೇಕಾಗಿದೆ. ಖಾಯಿಲೆ ಇರುವವರು ಆಸ್ಪತ್ರೆಗೆ ತೆರಳಲು ರಸ್ತೆ ಇಲ್ಲದೆ ತೊಂದರೆಯಾಗಿದೆ.ಇದೀಗ ಇರುವ ಕಚ್ಚಾ ರಸ್ತೆಯನ್ನು ತೆಗೆಯಲು ಷಡ್ಯಂತ್ರ ನಡೆಸಲಾಗುತ್ತಿದೆ.

ಈಗಾಗಲೇ ಜಿಲ್ಲಾಧಿಕಾರಿಗಳಿಗೆ ರಸ್ತೆ ಕುರಿತು ಮನವಿ ಮಾಡಲಾಗಿದೆ. ಹಳೆ ರಸ್ತೆ ಅಥವಾ ಹೊಸ ರಸ್ತೆಗಾಗಿ ಗ್ರಾ.ಪಂ.ಮೂಲಕ ಠರಾವು ಪಾಸ್ ಮಾಡಿ ಕಳಿಸುವಂತೆ ಸೂಚನೆ ನೀಡಿದರೂ ಗ್ರಾ.ಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಗ್ರಾಮದಲ್ಲಿ ಸರಕಾರ ಸಿಸಿ ರಸ್ತೆ ಸೇರಿ ಹಲವು ಅಭಿವೃದ್ಧಿ ಮಾಡಿದ್ದು ಮುಸ್ಟೂರು ಡಗ್ಗಿ ಕ್ಯಾಂಪ್ ನಿಂದ ಆಂಜನೇಯ ಕ್ಯಾಂಪ್ ಸಂಪರ್ಕ ಕಲ್ಪಿಸುವ ರಸ್ತೆ ಸಮಸ್ಯೆ ಪರಿಹಾರ ಗ್ರಾಮಚಾಯಿತಿ ಪ್ರಮಾಣಿಕ ಯತ್ನ ಮಾಡುತ್ತಿಲ್ಲ ಕೂಡಲೇ ರಸ್ತೆ ನಿರ್ಮಿಸದೇ ಹೋದರೆ ತಹಸೀಲ್ದಾರ್ ಕಚೇರಿ ಎದುರು ಕುಟುಂಬಗಳ ಸಮೇತ ಹೋರಾಟ ನಡೆಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next