Advertisement

ಸಮರ್ಪಕ ಬಸ್‌ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

03:34 PM Dec 01, 2019 | Team Udayavani |

ಸಾಂಬ್ರಾ: ವೇಳೆಗೆ ಸರಿಯಾಗಿ ಬಸ್‌ ಬಾರದಿರುವುದನ್ನು ಖಂಡಿಸಿ ಉಚಗಾಂವ, ಗೋಜಗೆ, ಅಂಬೆವಾಡಿ ಗ್ರಾಮಸ್ಥರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಶನಿವಾರ ಸಾರಿಗೆ ಬಸ್‌ ತಡೆದು ಪ್ರತಿಭಟಿಸಿದರು.

Advertisement

ಉಚಗಾಂವ, ಗೋಜಗೆ, ಅಂಬೆವಾಡಿ ಗ್ರಾಮದಿಂದ ಬೆಳಗಾವಿನಗರದ ಶಾಲಾ-ಕಾಲೇಜಿಗೆ ತೆರಳುವ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳುಸಮರ್ಪಕ ಸಾರಿಗೆ ಸೌಲಭ್ಯ ನೀಡಬೇಕೆಂದುಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಡಿಪೋ ವ್ಯವಸ್ಥಾಪಕರು, ಸಮರ್ಪಕ ಬಸ್‌ ಸೌಲಭ್ಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಮಲ್ಲಪ್ಪ ತರಳೆ, ಮನೋಹರ ರಾಕ್ಷೆ, ಆರ್‌.ಐ. ಪಾಟೀಲ, ಲಕ್ಷ್ಮಣ ತರಳೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next