Advertisement

ಬಸ್‌ ಸಂಚಾರಕ್ಕೆ ಒತ್ತಾಯಿಸಿ ಪ್ರತಿಭಟನೆ

02:15 PM Oct 01, 2019 | Suhan S |

ಶಿರಹಟ್ಟಿ: ಬೆಳ್ಳಟ್ಟಿಯಿಂದ ಗದಗ ಮಾರ್ಗದ ಕಡೆಗೆ ಬೆಳಗ್ಗೆ 6:30, ಮಧ್ಯಾಹ್ನ 2:30 ಮತ್ತು ಸಂಜೆ 6:30ಕ್ಕೆ ಹೆಚ್ಚಿನ ಬಸ್‌ ಬಿಡುವಂತೆ ಒತ್ತಾಯಿಸಿ . ಲಕ್ಷ್ಮೇಶ್ವರ ಬಸ್‌ ಘಟಕದ ವ್ಯವಸ್ಥಾಪಕರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿತ್ತು. ಆದರೆ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆ ಈಡೇರಿಸದೇ ಇರುವ ಕಾರಣ ಸೋಮವಾರ ಬಸ್‌ ಸಂಚಾರ ಸ್ಥಗಿತಗೊಳಿಸಿ ಬೇಡಿಕೆ ಈಡೇರುವವರೆಗೂ ಹೋರಾಟಕ್ಕೆ ಮುಂದಾದರು.

Advertisement

ಈ ಕುರಿತು ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ವೀರೇಶ ಕುರವತ್ತಿ ಮಾತನಾಡಿ, ಈಗಾಗಲೆ ಮನವಿ ಸಲ್ಲಿಸಿ ತಿಂಗಳಾದರೂ ಯಾವುದೇ ಪ್ರಯೋಜನವಾಗಿಲ್ಲ. ಒಮ್ಮೆಯೂ ಫೋನ್‌ ಕಾಲ್‌ ಸ್ವೀಕರಿಸಿಲ್ಲ. ಜೊತೆಗೆ ಇಂದು ಬಸ್‌ ಸಂಚರ ಸ್ಥಗಿತಗೊಳಿಸಿದ್ದರೂ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸದೇ ಇರುವುದು ಖಂಡನೀಯವಾಗಿದೆ. ಸದ್ಯ ಪಿಎಸ್‌ಐ ಬಸವರಾಜ ತಿಪ್ಪರೆಡ್ಡಿ ಮಾತಿಗೆ ಬೆಲೆಕೊಟ್ಟು ಪ್ರತಿಭಟನೆ ಹಿಂಪಡೆಯಲಾಗಿದೆ. ಮೂರು ದಿನದಲ್ಲಿ ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ  ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅರುಣ ಗಡ್ಡಿ, ಆನಂದ ಹಿರೇಹೊಳಿ, ಸಂತೋಷ ಗಾಂಜಿ, ಸಚಿನ್‌ ಮೊರಬದ, ಅರುಣ ಮಾಂಡ್ರೆ, ಮಲ್ಲಿಕಾರ್ಜುನ ಕರಿಗಾರ, ಮಾಂತೇಶ ಮಾಳಮ್ಮನವರ, ಅರುಣ ತಳವಾರ, ಪ್ರದೀಪ ನೇಕಾರ, ಸೋಹಿಲ್‌ ನದಾಫ್‌, ರಕ್ಷಿತ ಜೋತಿ, ಸವಿತಾ ಪಾಟೀಲ್‌, ಸಂಜು ಬಂಡಿ, ಕವಿತಾ ಪಾಟೀಲ್‌, ಸಾನ್ವಿ ಹಾದಿಮನಿ, ಮಿಂಚು ಬಂಡಿ, ಅನಿಲ ವಡವಿ, ಶಿವಕುಮಾರ ಬೂದಿಹಾಳ, ಅರುಣ ಅಕ್ಕಿ, ಸಂಜೀವ ಮಹಾದೇವಪ್ಪನವರ ಹಾಗೂ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next