Advertisement

ಡಿಜಿಪಿ ವರ್ಗಾವಣೆ ಖಂಡಿಸಿ ಪ್ರತಿಭಟನೆ

03:31 PM May 12, 2022 | Team Udayavani |

ಕಲಬುರಗಿ: ರಾಜ್ಯ ನಾಗರಿಕ ಹಕ್ಕುಜಾರಿ ನಿರ್ದೇಶನಾಲಯದ ಡಿಜಿಪಿ ರವೀಂದ್ರನಾಥ ವರ್ಗಾವಣೆ ರದ್ದುಪಡಿಸಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಬಗ್ಗೆ ತನಿಖೆ ಮಾಡಲು ಸಿಆರ್‌ಸಿ ಸೆಲ್‌ಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಎಸ್‌ಸಿ, ಎಸ್‌ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ರವೀಂದ್ರನಾಥ ನಿರ್ದೇಶನಾಲಯಕ್ಕೆ ಬಂದಾಗಿನಿಂದಲೂ ಉತ್ತಮ ಕೆಲಸ ನಡೆಯುತ್ತಿವೆ. ಆದರೂ ಸರ್ಕಾರ ಇತರರ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡುತ್ತಿದೆ. ಇದು ಸರಿಯಲ್ಲ ಎಂದು ಸಮಿತಿ ರಾಜ್ಯಾಧ್ಯಕ್ಷ ಶ್ರವಣಕುಮಾರ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಮಾರೆಪ್ಪ ನಾಯಕ ಮಗ್ಧಂಪೂರ, ನಂದ ‌ಕುಮಾರ ಮಾಲಿಪಾಟೀಲ, ನಂದಕುಮಾರ ನಾಯಕ, ಆನಂದ ತಾಜಸುಲ್ತಾನಪೂರ, ಶಿವಕುಮಾರ ನಾಯಕ, ವೆಂಕಟೇಶ ಕೊಡಚಿ, ಕಲ್ಯಾಣಿ ಸಿಂಗ್‌, ಬಸವರಾಜ ಪಾಳಾ, ಗೌತಮ ತಳಕೇರಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next