Advertisement

ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ

03:32 PM Jun 11, 2022 | Team Udayavani |

ಶಹಾಪುರ: ಬಿಜೆಪಿ ರಾಷ್ಟ್ರೀಯ ವಕ್ತಾರ ನೂಪುರ ಶರ್ಮಾ ಹಾಗೂ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ನವೀನ್‌ ಜಿಂದಾಲ್‌ ಮುಸ್ಲಿಂ ಧರ್ಮ ಮತ್ತು ಪ್ರವಾದಿ ಮಹ್ಮದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಇಲ್ಲಿನ ಮುಸ್ಲಿಂ ಒಕ್ಕೂಟ ಶುಕ್ರವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.

Advertisement

ಬಿಜೆಪಿ ನಾಯಕ ನೂಪುರ ಶರ್ಮಾ ದೂರದರ್ಶನ ಒಂದರಲ್ಲಿ ನಡೆದ ಚರ್ಚೆ ವೇಳೆ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮಹ್ಮದ್‌ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಅಲ್ಲದೇ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ನವೀನ್‌ ಜಿಂದಾಲ್‌ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾದಿ ಮಹ್ಮದ್‌ ರ ಬಗ್ಗೆ ಅವಹೇಳನಕಾರಿ ಟ್ವಿಟ್‌ ಮಾಡಿದ್ದು, ಈ ಇಬ್ಬರ ನಾಯಕರ ವಿರುದ್ಧ ಕೇಂದ್ರ ಸರ್ಕಾರ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ದೇಶಾದ್ಯಂತ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಲಿದೆ ಎಂದು ಮುಸ್ಲಿಂ ಬಾಂಧವರು ಎಚ್ಚರಿಕೆ ನೀಡಿದರು.

ಈ ವೇಳೆ ಸಯ್ಯದ್‌ ಸೈದುದ್ದೀನ್‌ ಖಾದ್ರಿ, ಸಯ್ಯದ್‌ ಮುಸ್ತಫಾ ದರ್ಬಾನ್‌, ಸಯ್ಯದ್‌ ಶಫಿವುದ್ದೀನ್‌, ಇಸ್ಮಾಯಿಲ್‌ ಚಾಂದ್‌, ನೂರುದ್ದೀನ್‌ ಖಾದ್ರಿ, ರಫೀಕ್‌ ಚೌದ್ರಿ, ಸಯ್ಯದ್‌ ಮುರ್ತುಜಾ, ಬಾಬಾ ಪಟೇಲ್‌, ತಲಾಕ್‌ ಚಾಂದ್‌, ನಯೀಮ್‌ ಅಫ್ಘಾನ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next