Advertisement

ಉದ್ಯೋಗಾವಕಾಶಕ್ಕೆ ಆಗ್ರಹಿಸಿ ಪ್ರತಿಭಟನೆ

02:57 PM Nov 13, 2019 | Team Udayavani |

ಜೋಯಿಡಾ: ತಾಲೂಕಾ ಕೇಂದ್ರದಲ್ಲಿನ ಪ್ರಮುಖ ಕಚೇರಿಗಳಲ್ಲಿ ಗುತ್ತಿಗೆ ಆಧಾರಿತ ಉದ್ಯೋಗದಲ್ಲಿ ಬೇರೆ ತಾಲೂಕಿನ ಯುವಕರ ಬದಲಿಗೆ ನಮ್ಮ ತಾಲೂಕಿನ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುವ ಮೂಲಕ ಕೆಲಸಕ್ಕಾಗಿ ಗೂಳೆ ಹೋಗುವುದನ್ನು ತಪ್ಪಿಸಬೇಕೆಂದು ತಾಲೂಕು ಯುವ ಒಕ್ಕೂಟ ತಹಶೀಲ್ದಾರರಿಗೆ ಮನವಿ ನೀಡಿ ಆಗ್ರಹಿಸಿದ್ದು, ಇದಕ್ಕೆ ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.

Advertisement

ಜೋಯಿಡಾ ತಾಲೂಕು ಕೇಂದ್ರದ ವಿವಿಧ ಕಚೇರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ದಾಂಡೇಲಿ, ಕಾರವಾರ, ಹಳಿಯಾಳಗಳಿಂದ ಯುವಕ, ಯುವತಿಯರು ಬರುತ್ತಿದ್ದಾರೆ. ಆದರೆ ತಾಲೂಕಿನ ನಿರುದ್ಯೋಗಿ ಯುವಕರಿಗೆ ಅವಕಾಶ ಇಲ್ಲದಂತಾಗಿ ಗೋವಾ, ಬೆಂಗಳೂರು, ಮಹಾರಾಷ್ಟ್ರ ಮುಂತಾದೆಡೆ ಗೂಳೆಹೋಗವ ಪರಿಸ್ಥಿತಿ ಎದುರಾಗಿದೆ.

ಇದು ತಾಲೂಕಿನ ಯುವಕರಿಗೆ ತಾಲೂಕಿನ ಅಧಿಕಾರಿಗಳು ಮಾಹಿತಿ ನೀಡದೆ ಗುತ್ತಿಗೆ ಸಂಸ್ಥೆಗಳಿಂದ ಬೇರೆ ಬೇರೆ ತಾಲೂಕಿನ ಯುವಕರಿಗೆ ಗುತ್ತಿಗೆ ಆಧಾರದಿಂದ ನೇಮಿಸಿಕೊಳ್ಳುವ ಪರಿಣಾಮದಿಂದಾಗಿದೆ ಎಂದು ಯುವ ಒಕ್ಕೂಟ ಆಪಾದಿಸಿದೆ. ಹೊರ ತಾಲೂಕಿನ ಯುವಕರಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗಕ್ಕೆ ಅವಕಾಶ ನೀಡುವ

ಪೂರ್ವದಲ್ಲಿ ತಾಲೂಕಿನ ಯುವಕರಿಗೆ ಮೊದಲ ಆದ್ಯತೆ ನೀಡುವ ಮೂಲಕ ತಾಲೂಕಿನ ಸುಶಿಕ್ಷಿತ ಯುವಕರಿಗೆ ಉದ್ಯೋಗ ಹೊಂದಲು ಅವಕಾಶ ನೀಡಬೇಕೆಂದು ಯುವ ಒಕ್ಕೂಟ ಆಗ್ರಹಿಸಿದ್ದು, ಇಲ್ಲದೆ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಯುವ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ನಾಯ್ಕ, ತುಳಸಿದಾಸ ವೇಳಿಪ, ಸೂರಜ ನಾಯ್ಕ, ಉಮೇಶ ಗಾವಡಾ, ಅರ್ಜುನ ಗಾವಡಾ, ಕಿರಣ ಬಾಂದೇಕರ್‌ ಮತ್ತಿರರು ಎಚ್ಚರಿಕೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next