Advertisement

ಹಾಲುಮತ ಸಮಾಜದಿಂದ ಪ್ರತಿಭಟನೆ

12:14 PM Mar 30, 2022 | Team Udayavani |

ಜೇವರ್ಗಿ: ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕುರುಬ ಸಮಾಜದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಹಾಲುಮತ ಸಂಗೊಳ್ಳಿ ರಾಯಣ್ಣ ಸ್ವಾಭಿಮಾನಿಗಳ ವೇದಿಕೆ ತಾಲೂಕು ಘಟಕದ ನೇತೃತ್ವದಲ್ಲಿ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ ಪೊಲೀಸ್‌ ಠಾಣೆಗೆ ತೆರಳಿ ಪಿಎಸ್‌ಐ ಸಂಗಮೇಶ ಅಂಗಡಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿ, ಅವಹೇಳನಕಾರಿ ಹೇಳಿಕೆ ನೀಡಿದ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಿ, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಮಾನಪ್ಪ ಪೂಜಾರಿ, ಎಂ.ಎಸ್‌.ಪಾಟೀಲ, ತಮ್ಮಣ್ಣ ಬಾಗೇವಾಡಿ, ಶಿವಶರಣ ಮಂದೇವಾಲ, ಈರಣ್ಣ ಬಿದರಾಣಿ, ಶರಣು ಮುತ್ತಕೋಡ, ಲಿಂಗರಾಜ ಮಾಸ್ಟರ್‌, ಬಸವರಾಜ ಬಾಗೇವಾಡಿ, ಲಿಂಗರಾಜ ಮಾಸ್ತರ, ಲಕ್ಷ¾ಣ ಸೊನ್ನ, ಮಹಾದೇವಪ್ಪ ಮಾವನೂರ, ಮಾಳು ಜಮಖಂಡಿ, ದೇವಿಂದ್ರ ಹೆಗ್ಗಿನಾಳ, ಸಿದ್ಧು ಹಸನಾಪುರ, ಭಿಮರಾಯಗೌಡ, ಸೋಮುಜಿ ಸುಂಬಡ, ಲೋಕೇಶ ಮುತ್ತಕೋಡ, ರವಿ ಅವರಾದ, ಶಾಂತು ಸರಡಗಿ, ಭಾಗು ಹಸನಾಪುರ, ಶರಣು ಮೈಲಾರಿ, ಪ್ರಶಾಂತ, ಸಿದ್ಧು ನರಿಬೋಳ ಹಾಗೂ ಕುರುಬ ಸಮಾಜ ಬಾಂಧವರು, ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next