Advertisement

Kumar Master ಮರು ನೇಮಕ ಮಾಡುವಲ್ಲಿ ಶಿಕ್ಷಣ ಇಲಾಖೆ ವಿಫಲ ಖಂಡಿಸಿ ಪ್ರತಿಭಟನೆ

12:25 PM Jul 04, 2023 | Kavyashree |

ತೀರ್ಥಹಳ್ಳಿ: ಪಟ್ಟಣದ ಸೊಪ್ಪುಗುಡ್ಡೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ  ವಿಕಲಚೇತನ ಶಾಲೆಯ ಮುಖ್ಯ ಉಪಾಧ್ಯಾಯ ಕುಮಾರ್ ಅವರನ್ನು ಇತ್ತೀಚಿಗೆ ವರ್ಗಾವಣೆ ಮಾಡಲಾಗಿದೆ.

Advertisement

ವರ್ಗಾವಣೆ ತಡೆಹಿಡಿದು ಮತ್ತೆ ಸೊಪ್ಪು ಗುಡ್ಡೆಯ ಶಾಲೆಗೆ  ವರ್ಗಾಯಿಸಬೇಕು ಎಂದು ಗ್ರಾಮಸ್ಥರು, ಶಾಲೆಯ ವಿದ್ಯಾರ್ಥಿಗಳ ಪೋಷಕರು ಇತ್ತೀಚಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಸಂಬಂಧಪಟ್ಟ ಶಿಕ್ಷಣ ಇಲಾಖೆಗೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.

ಇದಕ್ಕೆ ಸ್ಪಂದನೆ ನೀಡಿದ ಶಿವಮೊಗ್ಗ ಶಿಕ್ಷಣಾಧಿಕಾರಿಗಳು ತಕ್ಷಣ ಕುಮಾರ್ ಅವರನ್ನು ವರ್ಗಾಯಿಸುತ್ತೇವೆ ಎಂಬ ಭರವಸೆ ನೀಡಿದ್ದರು.

ಆದರೆ ಕಳೆದ ಒಂದು ವಾರದಿಂದ ಕುಮಾರ್ ಮಾಸ್ಟರ್ ಅವರನ್ನು ವರ್ಗಾಯಿಸದೆ ಇರುವ ಕಾರಣ ಇಂದು ತೀರ್ಥಹಳ್ಳಿಯ ತಾಲೂಕು ಕಚೇರಿ ಮುಂಭಾಗದಲ್ಲಿ ಪೋಷಕರು, ಮಕ್ಕಳು, ಪಟ್ಟಣ ಪಂಚಾಯತ್ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತಕ್ಷಣವೇ ಕುಮಾರ್ ಮಾಸ್ಟರ್ ಅವರನ್ನು ವರ್ಗಾಯಿಸುವವರೆಗೂ  ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟಣ ಪಂಚಾಯಿತಿಯ ಈ ಭಾಗದ ಸದಸ್ಯ ಸುಪ್ಪುಗುಡ್ಡೆ ರಾಘವೇಂದ್ರ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next