Advertisement

ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ

12:18 PM Feb 05, 2020 | Suhan S |

ಬೆಳಗಾವಿ: ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಮಂಗಳವಾರ ಮುಸ್ಲಿಂ ಸಂಘಟನೆಗಳ ನೂರಾರು ಸದಸ್ಯರು ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ನಗರದ ಕಿಲ್ಲಾ ಕೆರೆಗೆ ಹೊಂದಿಕೊಂಡಂತೆ ಕಣಬರಗಿ ರಸ್ತೆಯ ಫುಟ್‌ಪಾತ್‌ ಮೇಲೆ ಸಾಲಾಗಿ ಕುಳಿತ ಅಸಂಖ್ಯಾತ ಮುಸ್ಲಿಂ ಬಾಂಧವರು ಶಾಂತಿಯುತ ಪ್ರತಿಭಟನೆ ನಡೆಸಿ ಪೌರತ್ವ ಕಾಯ್ದೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಾನು ಭಾರತವನ್ನು ಪ್ರೀತಿಸುತ್ತೇನೆ. ಆದರೆ ಎನ್‌ಆರ್‌ಸಿ ಹಾಗೂ ಸಿಎಎ ಕಾಯ್ದೆಗಳನ್ನು ವಿರೋಧಿಸುತ್ತೇನೆ. ಭಾರತ ಸಂವಿಧಾನವನ್ನು ರಕ್ಷಿಸಿ ಎಂಬ ಸಂದೇಶದ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಜನವಿರೋಧಿಯಾಗಿರುವ ಸಿಎಎ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next