Advertisement

ಸಿಎಎ-ಎನ್‌ಆರ್‌ಸಿ ಕಾಯ್ದೆ ಜಾರಿಗೆ ವಿರೋಧ

04:12 PM Feb 05, 2020 | Suhan S |

ಕಾರವಾರ: ಸಿಎಎ ಹಾಗೂ ಎನ್‌ ಆರ್‌ಸಿ ಕಾಯ್ದೆ ಜಾರಿ ವಿರೋಧಿಸಿ ಕಾರವಾರದಲ್ಲಿ ನಾರ್ಥ್ ಕೆನರಾ ಮುಸ್ಲಿಂ ಯುನೈಟೆಡ್‌ ಫೋರಂ ವತಿಯಿಂದ ಪ್ರತಿಭಟನೆ ನಡೆಯಿತು. ನಗರದ ಡಿಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ತೆಗೆದುಹಾಕುವಂತೆ ಆಗ್ರಹಿಸಿದರು.

Advertisement

ಅಲ್ಲದೇ, ಸಿಎಎ ಕಾಯ್ದೆಯನ್ನು ಜಾತಿ ಆಧಾರದಲ್ಲಿ ರೂಪಿಸಿದ್ದು, ಇದರಲ್ಲಿ ಮುಸ್ಲಿಂಮರನ್ನ ದೇಶದಿಂದ ಹೊರಹಾಕುವ ದುರುದ್ದೇಶವಿದೆ. ಇದು ಅಸಂವಿಧಾನಿಕ ಕಾಯ್ದೆಯಾಗಿದ್ದು, ಸಾಮಾನ್ಯ ನಾಗರಿಕರಿಗೆ ಈ ಕಾನೂನುಗಳಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ತಕ್ಷಣ ಕೇಂದ್ರ ಸರ್ಕಾರ ಸಿಎಎ, ಎನ್‌ಆರ್‌ಸಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಕೆ.ಗೆ ಕಾಯ್ದೆ ಹಿಂಪಡೆಯುವಂತೆ ಮನವಿ ಸಲ್ಲಿಸಲಾಯಿತು.

ಸಿಪಿಐ ಪಾಲಿಟ ಬ್ಯೂರೋ ಸದಸ್ಯರು ಹಾಗೂ ಮಾಜಿ ಸಂಸದರು ಎಂ.ಎ. ಬೇಬಿ, ಸಂಸತ್‌ ಸದಸ್ಯರು ಎಳಮಾರಮ್‌ ಕರಿಂ, ರಾಜ್ಯ ಕಾರ್ಯದರ್ಶಿ ಯ.ಬಸವರಾಜ್‌, ಜಿಲ್ಲಾ ಸಮಿತಿ ಶಾಂತಾರಾಮ ನಾಯ್ಕ ಹಾಗೂ ಕೆನರಾ ಮುಸ್ಲಿಂ ಯುನೈಟೆಡ್‌ ಫೋರಂ ಸದಸ್ಯರು ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next