Advertisement

ಹೆಸರು ಖರೀದಿ ವಿಳಂಬ ಖಂಡಿಸಿ ಪ್ರತಿಭಟನೆ

05:31 PM Sep 26, 2018 | Team Udayavani |

ನವಲಗುಂದ: ಸರಕಾರ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ನೋಂದಣಿ ಮುಗಿದು 10 ದಿನ ಗತಿಸಿದರೂ ಇನ್ನೂವರೆಗೆ ರೈತರಿಂದ ಹೆಸರು ಖರೀದಿ ಪ್ರಾರಂಭಿಸದಿರುವುದನ್ನು ಖಂಡಿಸಿ ಪಕ್ಷಾತೀತ ಹೋರಾಟ ಸಮಿತಿ ರೈತ ಹೋರಾಟಗಾರರು ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಒಂದು ಗಂಟೆಗೂ ಹೆಚ್ಚು ಕಾಲ ತಡೆದು ಪ್ರತಿಭಟಿಸಿದರು.

Advertisement

ನೋಂದಣಿ ವೇಳೆ ರೈತರಿಂದ 10 ಕ್ವಿಂಟಲ್‌ ಹೆಸರು ಖರೀದಿಸುವ ಕುರಿತು ವಾಗ್ಧಾನ ಮಾಡಿದ್ದ ಸರಕಾರಗಳು ಈಗ ಹೊಸ ಆದೇಶ ಪ್ರಕಟಿಸಿ ಕೇವಲ ನಾಲ್ಕು ಕ್ವಿಂಟಲ್‌ ಖರೀದಿಗೆ ಮುಂದಾಗಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ. ರೈತರು ಅನಿವಾರ್ಯವಾಗಿ ಬೀದಿಗೆ ಇಳಿಯುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಉಭಯ ಸರಕಾರಗಳ ವಿರುದ್ಧ ಕಿಡಿಕಾರಿದರು. ಕೂಡಲೇ ಹೊಸ ಆದೇಶ ಹಿಂಪಡೆದು 10 ಕ್ವಿಂಟಲ್‌ ಹೆಸರು ಖರೀದಿಗೆ ಸರಕಾರ ಮುಂದಾಗಬೇಕು. ಸೆ. 30ರ ಒಳಗಾಗಿ ಖರೀದಿ ಆರಂಭಿಸಬೇಕು. ಜೊತೆಗೆ ಬಾಕಿ ಉಳಿದ ರೈತರ ನೋಂದಣಿ ಕಾರ್ಯವನ್ನು ಮಾಡಿ ರೈತರ ನೆರವಿಗೆ ಧಾವಿಸದೇ ಹೋದರೆ ಅ. 1ರಿಂದ ಸರಕಾರಿ ಕಚೇರಿಗಳಿಗೆ ಬೀಗ ಜಡಿದು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ರೈತ ಹೋರಾಟಗಾರು ಎಚ್ಚರಿಸಿದರು. ಬಳಿಕ ತಹಶೀಲ್ದಾರ್‌ ನವೀನ ಹುಲ್ಲೂರ ಅವರಿಗೆ ಮನವಿ ಸಲ್ಲಿಸಿದರು.

ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ, ರೈತ ಮುಖಂಡ ಡಿ.ವಿ. ಕುರಹಟ್ಟಿ, ಸುಭಾಸಚಂದ್ರಗೌಡ ಪಾಟೀಲ, ಬಸಯ್ಯ ಮಠಪತಿ, ಸಿದ್ದಪ್ಪ ಮುಪ್ಪಯ್ಯನವರ, ಮಲ್ಲಪ್ಪ ರಡ್ಡೇರ, ರಘುನಾಥ ನಡವಿನಮನಿ, ಆರ್‌.ಎಂ. ನಾಯ್ಕರ, ಸಿದ್ದಲಿಂಗಪ್ಪ ಹಳ್ಳದ, ನಾಗರಾಜ ಭೋವಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next