Advertisement

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ

04:53 PM Dec 04, 2019 | Team Udayavani |

ಬಾಗಲಕೋಟೆ: ಕ್ಷೌರಿಕ ಸಮಾಜವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಾನಿಸಿದ್ದಾರೆ ಎಂದು ಆರೋಪಿಸಿ ಹಡಪದ ಅಪ್ಪಣ್ಣ ಸಮಾಜ ಬಾಂಧವರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ನವನಗರದ ಡಾ| ಅಂಬೇಡ್ಕರ್‌ ಭವನದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಡಪದ ಅಪ್ಪಣ್ಣಸಮಾಜದ ಪ್ರಮುಖರು ಮಾತನಾಡಿ, ಮಾಜಿಸಿಎಂ ಸಿದ್ದರಾಮಯ್ಯ ಕ್ಷೌರಿಕ ಸಮಾಜದ ಬಗ್ಗೆ ಅವಮಾನಕರ ಪದ ಬಳಸಿ ಮಾತನಾಡಿದ್ದಾರೆ. ಇದರಿಂದ ಸಮಾಜ ಬಾಂಧವರಿಗೆ ತೀವ್ರ ನೋವಾಗಿದೆ. ಕೂಡಲೇ ಸಮಾಜ ಬಾಂಧವರ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.

ಕ್ಷೌರಿಕ ಸಮಾಜ, ನಿತ್ಯ ಕೆಲಸವನ್ನೇ ನಂಬಿ ಜೀವನ ನಡೆಸುವವರು. ಅವರ ವೃತ್ತಿಯನ್ನೇ ಅವಮಾನಿಸುವ ರೀತಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಇದುಅತ್ಯಂತ ಅವಮಾನಕರ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಶರಣ ಹಡಪದ ಅಪ್ಪಣ್ಣ ಸಮಾಜ ಅಭಿವೃದ್ಧಿ ಸಂಘದ ರಾಜ್ಯ ಘಟಕ ಅಧ್ಯಕ್ಷ ಎಚ್‌.ಡಿ. ವೈದ್ಯ, ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಎಂ.ಎಸ್‌. ನಾವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹಡಪದ, ಮುಖಂಡರಾದ ವಿ.ಡಿ. ನಾವಿ, ವಿಠಲ ಹಡಪದ, ಹನುಮಂತ ಹಡಪದ, ಸುರೇಶ ಹಡಪದ, ನೀಲಪ್ಪ ಹಡಪದ, ಪ್ರಭು ಹಿಪ್ಪರಗಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next