Advertisement

ಹೊರ ಜಿಲ್ಲೆಯವರನ್ನು ತಡೆದು ಪ್ರತಿಭಟನೆ

07:13 PM May 02, 2020 | Suhan S |

ರಾಣಿಬೆನ್ನೂರು: ಜಿಲ್ಲೆ  ಕೋವಿಡ್ 19 ವೈರಸ್‌ ಸೋಂಕು ಇಲ್ಲದ ಕಾರಣ ಹಸಿರು ವಲಯವಾಗಿದ್ದು, ಇದರಿಂದ ಲಾಕ್‌ ಡೌನ್‌ ಸಡಿಲಿಕೆಯಂದಾಗಿ ಬಟ್ಟೆ ಖರೀದಿಗೆ ರಾಣಿಬೆನ್ನೂರಿಗೆ ದಾವಣಗೆರೆ ಮತ್ತು ಗದಗ ಜಿಲ್ಲೆಗಳಿಂದ ವಾಹನಗಳ ಮೂಲಕ ಜನರು ಹಿಂಡು ಹಿಂಡಾಗಿ ಆಗಮಿಸುತ್ತಿದ್ದಾರೆ.

Advertisement

ಇದರಿಂದ ಭಯಗೊಂಡ ಇಲ್ಲಿನ ದೊಡ್ಡಪೇಟೆ ನಿವಾಸಿಗಳು ಅವರನ್ನು ತಡೆದು ಪ್ರತಿಭಟನೆಗೆ ಮುಂದಾದ ಘಟನೆ ಶುಕ್ರವಾರ ನಡೆದಿದೆ. ದಾವಣಗೆರೆ ಮತ್ತು ಗದಗ ಜಿಲ್ಲೆಗಳು ಕೋವಿಡ್ 19 ವೈರಸ್‌ನಿಂದ ಮುಕ್ತವಾಗದ ಕಾರಣ ಇಲ್ಲಿನ ನಿವಾಸಿಗಳು ಅವರನ್ನು ಖರೀದಿಗೆ ತೆರಳದಂತೆ ತಡೆದರು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಹಿಂಡು ಹಿಂಡಾಗಿ ಆಗಮಿಸುತ್ತಿರುವುದರಿಂದ ಭಯಗೊಂಡು ನಿರ್ಬಂಧಕ್ಕೆ ಮುಂದಾದರು. ಸಕಾಲಕ್ಕೆ ಪೊಲೀಸರು ಆಗಮಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅವರಿಗೆ ತಿಳಿ ಹೇಳಿದ ಮೇಲೆ ಪ್ರತಿಭಟನೆ ಹಿಂಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next