Advertisement

ಸಿಎಎ-ಎನ್‌ಆರ್‌ಸಿ ವಿರೋಧಿಸಿ ಅನಿರ್ದಿಷ್ಟಾವಧಿ ಧರಣಿ

11:37 AM Jan 28, 2020 | Suhan S |

ಹುಬ್ಬಳ್ಳಿ: ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ವಿರೋಧಿಸಿ ಅಂಜುಮನ್‌ ಇಸ್ಲಾಂ ಸಂಸ್ಥೆಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರವೂ ಮುಂದುವರಿಯಿತು.

Advertisement

ಮಿನಿ ವಿಧಾನಸೌಧ ಮುಂಭಾಗದಲ್ಲಿ ನಡೆದ ಧರಣಿಯಲ್ಲಿ ಸುನ್ನಿ ಮುಸ್ಲಿಂ ಬಾಗಬಾನ್‌ ಜಮಾತ್‌, ಪಿಂಜಾರ್‌ ಗಲ್ಲಿ, ಪೆಂಡಾರ್‌ ಗಲ್ಲಿ, ತಲೀಂಖಾನ್‌ ಜಮಾತ್‌, ದೇಸಾಯಿ ಗಲ್ಲಿ ಜಮಾತ್‌, ಹೈದರ್‌ಶಾ ದರ್ಗಾ ಜಮಾತ್‌ನ ಪ್ರಮುಖರು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. ನಂತರ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿ ಅರ್ಪಿಸಲಾಯಿತು.

ಅಂಜುಮನ್‌ ಅಧ್ಯಕ್ಷ ಮಹ್ಮದ್‌ ಯೂಸೂಫ್‌ ಸವಣೂರ, ಪ್ರಮುಖರಾದ ಅಲ್ತಾಫ್‌ ಕಿತ್ತೂರ, ಎಂ.ಎ. ಪಠಾಣ, ಎಸ್‌.ಜಿ. ಹಿರೇಮಠ, ಪಿತಾಂಬ್ರಪ್ಪ ಬಿಳಾರ, ಅಬ್ದುಲ್‌ ರಜಾಕ್‌ ನಾಯಕ, ಸಿಕಂದರ್‌ ಬಾಷಾ, ಮುನ್ನಾ ಹೆಬ್ಬಳ್ಳಿ, ಬಾಬಾಜಾನ್‌ ಧಾರವಾಡ, ಮಲ್ಲಿಕಜಾನ್‌ ನಿಜಾಪುರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next