Advertisement

ಬೆಮೆಲ್‌ ಖಾಸಗೀಕರಣ ವಿರೋಧಿಸಿ ಬೈಕ್‌ ರ್ಯಾಲಿ

01:37 PM Mar 13, 2021 | Team Udayavani |

ಕೋಲಾರ: ಜಿಲ್ಲೆಯ ಸಾರ್ವಜನಿಕ ಉದ್ಯಮವಾದ ಬೆಮೆಲ್‌ ಕಾರ್ಖಾನೆ ಖಾಸಗೀಕರಣ ವಿರೋಧಿಸಿ ಬೆಮೆಲ್‌ ನಿವೃತ್ತ ನೌಕರರು ಕೆಜಿಎಫ್‌ ನಗರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶುಕ್ರವಾರ ಬೈಕ್‌ ರ್ಯಾಲಿ ನಡೆಸಿ ಪ್ರತಿಭಟನೆ ನಡೆಸಿದರು.

Advertisement

ಬೆಮೆಲ್‌ ನಿವೃತ್ತ ಕಾರ್ಮಿಕ ಜಿ.ಅರ್ಜುನನ್‌ ಮಾತನಾಡಿ, ಸಾರ್ವಜನಿಕ ಉದ್ದಿಮೆಯಾದ ಬೆಮೆಲ್‌ ಸಂಸ್ಥೆಯು 1964ರಲ್ಲಿ ಮಾತƒಸಂಸ್ಥೆಯಾದ ಎಚ್‌ಎಎಲ್‌ನಿಂದ ಬೇರ್ಪಟ್ಟಿತು. ರೈಲು ಕೋಚ್‌ ಗಳ ಉತ್ಪಾದನೆ, ಬಿಡಿಭಾಗಗಳ ಪೂರೈಕೆಗಾಗಿಬೆಂಗಳೂರಿನಲ್ಲಿ ಸ್ಥಾಪನೆ ಗೊಂಡಿತು. ನಂತರಕೆಜಿಎಫ್‌, ಮೈಸೂರು ಹಾಗೂ ಪಾಲಕ್ಕಾಡ್‌ನ‌ಲ್ಲಿ ಉತ್ಪಾದನಾ ಘಟಕ ವಿಸ್ತರಿಸುವ ಜತೆಗೆ ರಕ್ಷಣೆ, ರೈಲು, ಮೆಟ್ರೋ, ಗಣಿಗಾರಿಕೆ ಮತ್ತು ಮೂಲ ಸೌಕರ್ಯ ಹಾಗೂ ಏರೋಸ್ಪೇಸ್‌ ವಲಯ ಗಳಿಗೆ ಅಗತ್ಯವಾದ ಯಂತ್ರ ಮತ್ತು ವಾಹನ ಉತ್ಪಾದಿಸುತ್ತಿದೆ ಎಂದರು.

ದೇಶಾದ್ಯಂತ ಮಾರಾಟ ಜಾಲ ಹೊಂದಿದ್ದು ಉತ್ಕೃಷ್ಟ ಸೇವೆ ನೀಡುತ್ತಿರುವ ಸಂಸ್ಥೆಯನ್ನು ಇದೀಗ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಮುಂದಾಗಿದ್ದು ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಪ್ರಾರಂಭದಿಂದಲೂ ಲಾಭದಾಯಕವಾಗಿಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರಸರ್ಕಾರಕ್ಕೆ ತೆರಿಗೆ ಹಾಗೂ ಲಾಭಾಂಶ ರೂಪದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ನೀಡಿದೆ. ಜತೆಗೆ ಷೇರುದಾರರಿಗೆ ಪ್ರತಿವರ್ಷ ಡಿವಿಡೆಂಡ್‌ ಪಾವತಿ ಮಾಡುತ್ತಾ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿದೆ. ಬೆಮೆಲ್‌ ಮೈಸೂರು ಘಟಕ 1984ರಲ್ಲಿ ಪ್ರಾರಂಭಗೊಂಡು ಸುಮಾರು 700 ಎಕರೆ ಪ್ರದೇಶದಲ್ಲಿ ಟ್ರಕ್‌, ಎಂಜಿನ್‌ ಹಾಗೂ ಏರೋ ಸ್ಪೇಸ್‌ ವಿಭಾಗಗಳನ್ನು ಹೊಂದಿದೆ. ಸದ್ಯ ಬೆಮೆಲ್‌ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರವು ಶೇ.54.03ರಷ್ಟು ಷೇರುಬಂಡವಾಳ ಹೊಂದಿದ್ದು, 2016ರ ನವೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟದ ಅನುಮೋದನೆ ಮೇರೆಗೆ ಶೇ.26ರಷ್ಟು ಷೇರನ್ನುಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆಆರಂಭಿಸಿ, ಅದರ ಮುಂದುವರೆದ ಭಾಗವಾಗಿಸಂಸ್ಥೆಯ ಆಡಳಿತ ನಿರ್ವಹಣೆಯನ್ನಖಾಸಗಿಯವರಿಗೆ ವಹಿಸುತ್ತಾ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಬೆಮೆಲ್‌ಸಂಸ್ಥೆಯಲ್ಲಿ ಪ್ರಸ್ತುತ ಸಾವಿರಾರು ಕಾರ್ಮಿಕರುಸೇವೆ ಸಲ್ಲಿಸುತ್ತಿದ್ದು, ಖಾಸಗಿಕರಣದಿಂದ ಉದ್ಯೋಗಭದ್ರತೆಗೆ ಧಕ್ಕೆ ಉಂಟಾಗಲಿದೆ. ಅಲ್ಲದೆ, ಮೀಸಲಾತಿಆಧಾರದ ನೇಮಕ ಪ್ರಕ್ರಿಯೆಗಳು ಸ್ಥಗಿತಗೊಂಡುಸಾಮಾಜಿಕ ನ್ಯಾಯ ಮರೀಚಿಕೆಯಾಗಲಿದೆ ಎಂದರು.

Advertisement

ನಗರದಲ್ಲಿ ನಡೆದ ಬೈಕ್‌ ರ್ಯಾಲಿಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದರು. ಪ್ರತಿಭಟನೆನೇತೃತ್ವವನ್ನು ನಿವೃತ್ತ ಬೆಮೆಲ್‌ ನೌಕರ ಆರ್‌. ರಾಜಶೇಖರನ್‌, ವಿ.ಮುನಿರತ್ನಂ, ಅಶೋಕ್‌ಲೋನಿ, ಆರ್‌.ಶ್ರೀನಿವಾಸ್‌, ಜಯಶೀಲನ್‌ ಅ.ಕೃ.ಸೋಮಶೇಖರ್‌, ಟಿ.ಎಂ ವೆಂಕಟೇಶ್‌, ಎನ್‌ ಎನ್‌ ಶ್ರೀರಾಮ್‌, ವಿಜಯಕುಮಾರಿ, ಆಶಾ,ಭೀಮರಾಜ್‌, ನಾರಾಯಣರೆಡ್ಡಿ, ರಮಣ್‌ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next