Advertisement

ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

06:06 AM May 27, 2020 | Suhan S |

ಹುಬ್ಬಳ್ಳಿ: ಜನತೆ, ಕಾರ್ಮಿಕರ ವಿರೋಧದ ನಡುವೆಯೂ, ಸರ್ಕಾರ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ದಿನದ ಕೆಲಸದ ಅವಧಿಯನ್ನು 8 ರಿಂದ 10 ಗಂಟೆಗೆ ಮತ್ತು ವಾರದ ಕೆಲಸದ ಅವಧಿಯನ್ನು 48 ಗಂಟೆಗಳಿಂದ 60 ಗಂಟೆಗಳಿಗೆ ಹೆಚ್ಚಿಸಿರುವುದು ಖಂಡನೀಯ ಎಂದು ಧಾರವಾಡ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಹಳೇಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ದುಡಿಯುವ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೀಡು, ಬಂಡವಾಳಗಾರರಿಗೆ ಹೆಚ್ಚು ಅನುಕೂಲ ಮಾಡುವ ಯತ್ನಕ್ಕೆ ಸರಕಾರಗಳು ಮುಂದಾಗಿವೆ. ಸರಕಾರದ ಕಾರ್ಮಿಕ ವಿರೋಧಿ  ನೀತಿ ಖಂಡಿಸಿ, ಕೆಲಸದ ಅವಧಿ ಹೆಚ್ಚಿಸಿರುವ ಸರಕಾರದ ಆದೇಶ ಪ್ರತಿಯನ್ನು ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.

ಕಾರ್ಮಿಕ ಮುಖಂಡರಾದ ಮಹೇಶ ಪತ್ತಾರ, ದೇವಾನಂದ ಜಗಾಪುರ, ಬಾಬಾಜಾನ ಮುಧೋಳ, ಅಶೋಕ ಬಾರ್ಕಿ, ಎನ್‌.ಎ.ಖಾಜಿ. ಎಂ.ಎಚ್‌. ಮುಲ್ಲಾ, ಬಿ.ಎ.ಮುಧೋಳ, ರಮೇಶ ಭೂಸ್ಲೆ, ಚಂದ್ರಶೇಖರ ಬೆಟಗೇರಿ, ಬಸೀರ್‌ ಅಹ್ಮದ್‌ ಮುಲ್ಲಾ, ಮಡಿವಾಳಗೌಡ ಇತತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next