Advertisement

ಅಮೂಲ್ಯ ಲಿಯೋನ್‌ ವಿರುದ್ಧ ಪ್ರತಿಭಟನೆ

01:07 PM Feb 23, 2020 | Suhan S |

ನರೇಗಲ್ಲ: ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶನಿವಾರ ವಿಶ್ವ ಹಿಂದು ಪರಿಷತ್‌, ಭಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಪಟ್ಟಣದ ಹಳೆ ಬಸ್‌ ನಿಲ್ದಾಣದಿಂದ ಹೊಸ ಬಸ್‌ ನಿಲ್ದಾಣದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹೊಸ ಬಸ್‌ ನಿಲ್ದಾಣದ ಹತ್ತಿರ ಸಮಾವೇಶಗೊಂಡು ಘಟನೆ ಕುರಿತು ಒಕ್ಕೋರಲಿನಿಂದ ಖಂಡಿಸಿದರು.

Advertisement

ವಿಶ್ವ ಹಿಂದು ಪರಿಷತ್‌ ಮುಖಂಡ ರಘುನಾಥ ಕೊಂಡಿ ಮಾತನಾಡಿ, ರಾಜ್ಯದಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನ ಕಾರ್ಯಕ್ರಮದ ಆಯೋಜಕರ ಮೇಲೂ ಕ್ರಮ ಕೈಗೊಳ್ಳಬೇಕು ಎಂದರು. ಮುಖಂಡರಾದ ಮಂಜುನಾಥ ಹೆಗಡೆ, ಜಗದೀಶ ಸಂಕನಗೌಡ್ರ, ಸಂಜೀವಕುಮಾರ ಕುಲಕರ್ಣಿ, ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತು ಕಡಗದ ಮಾತನಾಡಿದರು. ಶ್ರೀಶೈಲಪ್ಪ ಬಂಡಿಹಾಳ, ಮೌನೇಶ ಹೊಸಮನಿ, ಯಲ್ಲಪ್ಪ ಮಣ್ಣವಡ್ಡರ, ಶಶಿಧರ ಸಂಕನಗೌಡ್ರ, ರಾಮು ನಿರಂಜನ, ಸಂತೋಷ ಕಡೆತೋ ಟದ, ಶಿವು ಸಂಗನಾಳ, ರವಿ ಗೊರ್ಲಿ, ಸುರೇಶ ರಾಯಬಾಗಿ, ರಾಜು ಹಲಗೇರಿ ಸೇರಿದಂತೆ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next