Advertisement

ಸಿಲಿಂಡರ್‌, ಇಂಧನ ಏರಿಕೆ ವಿರುದ್ಧ ಪ್ರತಿಭಟನೆ

01:35 PM Feb 06, 2021 | Team Udayavani |

ಮೈಸೂರು: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ,ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಾರ್ಮಿಕ ವಿಭಾಗ ವತಿಯಿಂದ ಪ್ರತಿಭಟನೆ ನಡೆಯಿತು. ನಗರದ ರೈಲ್ವೆ ನಿಲ್ದಾಣದ ಮುಂಭಾಗ ಇರುವ ಬಾಬು ಜಗಜೀವನ್‌ ರಾಂ ವೃತ್ತದಲ್ಲಿ ಶುಕ್ರವಾರ ಸಮಾವೇಶಗೊಂಡ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಿಜೆಪಿ ನೇತೃತ್ವದ ಸರ್ಕಾರ ಹಲವಾರು ಭರವಸೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಈ ಆರು ವರ್ಷಗಳ  ಅವಧಿಯಲ್ಲಿ ಭಾರತದ ಆರ್ಥಿಕತೆ ಕುಸಿದಿದೆ. ಕಪ್ಪು ಹಣ ತಡೆಗಟ್ಟಲು ನೋಟು ಅಮಾನ್ಯಿàಕರಣ ಜಾರಿಗೆ ತಂದು ಕಾಂಗ್ರೆಸ್‌ ಸಸರ್ಕಾರದ ತನ್ನ ಅವಧಿಯಲ್ಲಿನ 7ಕ್ಕೂ ಹೆಚ್ಚು ಬೆಳವಣಿಗೆಗಳನ್ನು ನಾಶ ಮಾಡಿದೆ. ಇದರ ಪರಿಣಾಮ ದೇಶದ ಜಿಡಿಪಿ  ಶೇ.40ರಷ್ಟು ಇಳಿಕೆಯಾಯಿತು. ಈ ನೀತಿಯಿಂದಾಗಿ ರಾಷ್ಟ್ರಾದ್ಯಂತ ಸಣ್ಣ ಮತ್ತು ಮಧ್ಯಮ ಉದ್ಯಮದ ಮೇಲೆ ಭಾರೀ ಹೊಡೆತ ಬಿದ್ದಿದೆ. ಲಕ್ಷಾಂತರ ಕಾರ್ಖಾನೆಗಳು ಮುಚ್ಚಿವೆ. ಇದರ ಪರಿಣಾಮ ನಿರುದ್ಯೋಗ ಸ್ವಾತಂತ್ರ್ಯ ಭಾರತದಲ್ಲೇ ಶೇ.44ಕ್ಕೆ ಹೆಚ್ಚಿದೆ ಎಂದು ಕಿಡಿಕಾರಿದರು.

ಇದೇ ವೇಳೆ ಕೋವಿಡ್‌-19 ಕೊರೊನಾ ಮಹಾಮಾರಿಯಿಂದ ಯಾವುದೇ ಸೂಚನೆ ನೀಡದೆ ದೇಶಾದ್ಯಂತ ಲಾಕ್‌ಡೌನ್‌  ಹೇರಲಾಗಿತ್ತು. ಕೆಲಸವಿಲ್ಲದೆ, ಊಟವಿಲ್ಲದೆ, ವಲಸೆ ಕಾರ್ಮಿಕರು ಸ್ಥಳೀಯರು ಕೂಲಿಕಾರರು ನೂರಾರು ಕಿ.ಮೀ. ನಡೆದು ಹೋಗಿದ್ದರು. ಇಂತಹ ಪರಿಸ್ಥಿತಿಯಲ್ಲಿ 2021ರ ಬಜೆಟ್‌ ಜನಸಾಮಾನ್ಯರಿಗೆ ಯಾವುದೇ ಪರಿಹಾರ ನೀಡಿಲ್ಲ. ಬದಲಿಗೆ ಕಾರ್ಪೋರೆಟ್‌ ಕಂಪನಿಗಳಿಗೆ ಹಲವಾರು ರಿಯಾಯಿತಿಗಳನ್ನು ನೀಡಿ ಬಿಜೆಪಿ ಸರ್ಕಾರ ಬಡವರ ವಿರೋಧಿ ನೀತಿಗಳನ್ನು ಇನ್ನಷ್ಟು  ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದರು.

ವಿದೇಶದಲ್ಲಿ ಕಚ್ಚಾ ತೈಲಗಳು ಪ್ರತಿ ಬ್ಯಾರಲ್‌ಗೆ 50 ಡಾಲರ್‌ಗಿಂತ ಕಡಿಮೆ ದರವಿದ್ದಾಗ ಯುಪಿಎ ಸರ್ಕಾರ ಡೀಸೆಲ್‌,  ಪೆಟ್ರೋಲ್‌ನ್ನು 45-50 ರೂಪಾಯಿಯಲ್ಲಿ ಮಾರಾಟ ಮಾಡುತ್ತಿತ್ತು. ಆದರೆ ಈಗ ಅದೇ ಕಚ್ಚಾತೈಲ ಬೆಲೆ ಪ್ರತಿ ಬ್ಯಾರಲ್‌ಗೆ 50-55 ಡಾಲರ್‌ ಇದೆ. ಆದರೂ ಬಿಜೆಪಿ ಸರ್ಕಾರ ಅತಿ ಹೆಚ್ಚು ತೆರಿಗೆ ಹಾಕಿದೆ. ಅದರ ಪರಿಣಾಮ ಡೀಸೆಲ್‌ ಬೆಲೆ 85, ಪೆಟ್ರೋಲ್‌ 100ಕ್ಕೆ ಏರಿಕೆಯಾಗಿದೆ. ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ತೈಲಗಳ ಬೆಲೆ ಏರಿಕೆ ಅಗತ್ಯ ವಸ್ತುಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈಗಾಗಲೇ ಕೆಲಸವಿಲ್ಲದೆ ಬಡತನ ರೇಖೆಗಿಂತ ಕೆಳಗಿ ರುವವರ ಸಂಖ್ಯೆ ಹೆಚ್ಚಾಗಿದೆ. ಇಂತಹ  ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವೂ ಅದೇ ಧೋರಣೆ ಕೈಗೊಂಡಿದೆ. ಈ ನೀತಿಗಳನ್ನು ಕೈಬಿಟ್ಟು, ತಕ್ಷಣ ಏರಿಸಿರುವ ಪೆಟ್ರೋಲ್‌, ಡೀಸೆಲ್‌, ಅನಿಲ ಬೆಲೆಯನ್ನು ಇಳಿಸಬೇಕೆಂದು ಒತ್ತಾಯಿಸಿದರು.

 ಇದನ್ನೂ ಓದಿ :ಕೃಷಿ ಕಾಯ್ದೆ ವಿರೋಧಿಸಿ ರಸ್ತೆ ತಡೆ: ಬೆಳಗಾವಿಯಲ್ಲಿ ರೈತರನ್ನು ವಶಕ್ಕೆ ಪಡೆದ ಪೊಲೀಸರು

Advertisement

ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಆರ್‌.ಮೂರ್ತಿ,ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ ಕುಮಾರ್‌, ಜಿಲ್ಲಾ ಕಾರ್ಮಿಕ ಕಾಂಗ್ರೆಸ್‌ ಸಮಿತಿ  ಅಧ್ಯಕ್ಷ ಎಚ್‌. ಕೆ.ಮಂಜುನಾಥ್‌, ರಾಜ್ಯ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಮಾವಿನಹಳ್ಳಿ ರವಿ, ಡಿಸಿಸಿ ಪದಾಧಿಕಾರಿಗಳಾದ ಎಡತಲೆ ಮಂಜುನಾಥ್‌, ಗಿರೀಶ್‌, ಶಿವಪ್ರಸಾದ್‌, ಉತ್ತನಹಳ್ಳಿ ಶಿವಣ್ಣ, ಸಂಕಳ್ಳಿ ಬಸವರಾಜ್‌, ಕೆಪಿ ಚಿಕ್ಕಸ್ವಾಮಿ, ಪುಟ್ಟಸ್ವಾಮಿ, ಕಿರಾಳು ಸಂತೋಷ್‌, ಜಮೀರ್‌, ತಿಮ್ಮರಾಜು, ಗಿಣಿ ಸ್ವಾಮಿ, ಹೇಮಂತ್‌, ಮಿಥುನ್‌, ಚಂದನ ಗೌಡ, ಅಪ್ಪು,ಜೈರಾಮ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next