Advertisement

ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳ ರಕ್ಷಣೆ

09:35 AM Aug 07, 2019 | keerthan |

ಧಾರವಾಡ: ತುಂಬಿ ಹರಿಯುತ್ತಿರುವ ಹಳ್ಳ ನೋಡಲು ಹೋಗಿ ಇಬ್ಬರು ಮಕ್ಕಳು ಹಳ್ಳದಲ್ಲೇ ಜಾರಿ ಬಿದ್ದ ಘಟನೆ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ನಡೆದಿದೆ.

Advertisement

ಬೈಲಹೊಂಗಲ ರಸ್ತೆಯಲ್ಲಿರುವ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದ್ದು, ಆ ಹಳ್ಳವನ್ನು ನೋಡಲು ಇಬ್ಬರು ಮಕ್ಕಳು ಹೋಗಿದ್ದರು. ಈ ವೇಳೆ ಬಾಲಕಿಯೊಬ್ಬಳ ಕಾಲು ಜಾರಿ ಹಳ್ಳಕ್ಕೆ ಬೀಳುತ್ತಿದ್ದಂತೆ ಆಕೆಯನ್ನು ಹಿಡಿದು ಕೊಳ್ಳಲು ಆಕೆಯ ಅಣ್ಣ ಮುಂದಾಗಿದ್ದಾನೆ. ಸೆಳವಿಗೆ ಸಿಲುಕಿ ಆ ಬಾಲಕ ಕೂಡ ಹಳ್ಳಕ್ಕೆ ಬಿದ್ದಿದ್ದಾನೆ. ಕೂಡಲೇ ಅಲ್ಲೇ ಇದ್ದ ಗ್ರಾಮಸ್ಥರು ಮಾನವೀಯತೆ ಮೆರೆದು ಹಳ್ಳಕ್ಕೆ ಧುಮುಕಿ ಹಗ್ಗದ ಮೂಲಕ ಆ ಇಬ್ಬರೂ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next