Advertisement

ಕಲಬುರಗಿ: ಚರಂಡಿಯಲ್ಲಿ ಬಿದ್ದ ಹಸು ರಕ್ಷಣೆ

09:12 AM May 15, 2020 | keerthan |

ಕಲಬುರಗಿ: ನಗರದ ಜಗತ್ ವೃತ್ತ ಸಮೀಪದ ಕೇಂದ್ರ ಗ್ರಂಥಾಲಯ ಮುಂಭಾಗದ ಚರಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಹಸುವೊಂದನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

Advertisement

ಗುರುವಾರ ರಾತ್ರಿ ಹಸು ಬಿದ್ದಿರುವುದನ್ನು ಕಂಡ ನಾಗರಿಕರೊಬ್ಬರು ಅಗ್ನಿ ಶಾಮಕ ದಳಕ್ಕೆ ವಿಷಯ ಮುಟ್ಟಿಸಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹಸುವನ್ನು ರಕ್ಷಿಸಿದ್ದಾರೆ.

ಅಗ್ನಿ ಶಾಮಕ ಸಿಬ್ಬಂದಿಯಾದ ಅರ್ಜುನ್ ಅಂಕುಶ್, ವೈಜನಾಥ, ವಿಠ್ಠಲ್, ಪ್ರಕಾಶ ಕಟ್ಟಿಮನಿ, ಪ್ರವೀಣ್ ಭಾಲ್ಕೆ, ಜಂಬಣ್ಣ ಗೌಡ ಹಾಗೂ ರಾಮಜಿ ರಾಥೋಡ್ ಹಸು ರಕ್ಷಣೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next