Advertisement

Jnanavapi: “ಜ್ಞಾನವಾಪಿಯಲ್ಲಿ ಸಿಕ್ಕ ಹಿಂದೂ ವಸ್ತುಗಳ ರಕ್ಷಿಸಿ”- ನ್ಯಾಯಾಲಯ ಆದೇಶ

11:29 PM Sep 14, 2023 | Team Udayavani |

ನವದೆಹಲಿ: ವಾರಾಣಸಿ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶವೊಂದನ್ನು ನೀಡಿದ್ದು, ಜ್ಞಾನವಾಪಿ ಮಸೀದಿ ಸಮೀಕ್ಷೆ ವೇಳೆ ಹಿಂದೂ ಧರ್ಮ, ಪೂಜಾ ಪದ್ಧತಿಗೆ ಸಂಬಂಧಿಸಿದಂತೆ ಸಿಕ್ಕಿದ ಯಾವುದೇ ವಸ್ತುಗಳನ್ನು ಎಚ್ಚರಿಕೆಯಿಂದ ಕಾಪಾಡಬೇಕೆಂದು ಸೂಚಿಸಿದೆ.

Advertisement

ಜಿಲ್ಲಾಧಿ­ಕಾರಿ ಅಥವಾ ಅವರಿಂದ ನೇಮಕಗೊಂಡ ಯಾವುದೇ ವ್ಯಕ್ತಿ ಈ ವಸ್ತುಗಳನ್ನು ಜತನ­ದಿಂದ ರಕ್ಷಿಸಬೇಕು, ನ್ಯಾಯಾ­ಲಯಕ್ಕೆ ಅಗತ್ಯ­ವಿದ್ದಾಗ ಹಾಜರುಪಡಿಸಬೇಕು ಎಂದು ಹೇಳಿದೆ. ಸಮೀಕ್ಷೆ ವೇಳೆ ಹಿಂದೂ ಧರ್ಮಕ್ಕೆ ಸಂಬಂಧಿಸಿ­ಸಿಕ್ಕ ವಸ್ತುಗಳು ಪುರಾತತ್ವ ಮತ್ತು ಐತಿಹಾಸಿಕ ದೃಷ್ಟಿಯಿಂದ ಬಹಳ ಮಹತ್ವ ಹೊಂದಿವೆ ಎಂದೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next