Advertisement

ವಿಚಾರಣೆ ದಿನವಹಿಯೇ: ಸುಪ್ರೀಂ

12:55 AM Aug 10, 2019 | Team Udayavani |

ನವದೆಹಲಿ: ಅಯೋಧ್ಯೆಯ ಜಮೀನು ಮಾಲೀಕತ್ವದ ಬಗೆಗಿನ ವಿಚಾರಣೆಯನ್ನು ದಿನ ವಹಿ ಕೈಗೊಳ್ಳಲಾಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ. ವಾರದ 5 ದಿನವೂ ವಿಚಾರಣೆ ನಡೆದರೆ ನನಗೆ ಸಿದ್ಧತೆ ನಡೆಸಲು ಕಷ್ಟವಾಗುತ್ತದೆ. ಹೀಗಾಗಿ ಶುಕ್ರವಾರ ವಿಚಾರಣೆ ನಡೆಸಬಾರದು ಎಂದು ಎಂ.ಸಿದ್ಧಿಕಿ ಮತ್ತು ಅಖೀಲ ಭಾರತ ಸುನ್ನಿ ವಕ್ಫ್ ಬೋರ್ಡ್‌ ಸಹಿತ ಹಲವು ಮುಸ್ಲಿಂ ಸಂಘಟನೆಗಳನ್ನು ಪ್ರತಿನಿಧಿಸುತ್ತಿರುವ ವಕೀಲ ರಾಜೀವ್‌ ಧವನ್‌ ಆಗ್ರಹಿಸಿದ್ದಾರೆ.

Advertisement

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಿಚಾರಣೆಯು ಈಗಾಗಲೇ ನಿಶ್ಚಯಿಸಿದಂತೆ ದಿನವಹಿ ನಡೆಯಲಿದೆ. ಅಗತ್ಯಬಿದ್ದರೆ ನಿಮಗೆ ವಾರದ ಮಧ್ಯೆ ವಿಚಾರಣೆಗೆ ಸಿದ್ಧತೆ ಮಾಡಿಕೊಳ್ಳಲು ಬಿಡುವು ನೀಡಲಾಗುವುದು ಎಂದು ಹೇಳಿತು. ಜತೆಗೆ ಮುಂದಿನ ವಾರದ ವಿಚಾರಣೆ ಮಂಗಳವಾರ (ಆ.13)ದಿಂದ ಶುರುವಾಗಲಿದೆ ಎಂದಿತು.

ರಾಮನ ವಂಶಜರು ವಾಸಿಸುತ್ತಿದ್ದಾರೆಯೇ?: ಅಯೋಧ್ಯೆಯಲ್ಲಿ ಶ್ರೀರಾಮನ ವಂಶಸ್ಥರಾಗಿರುವ ರಘು ವಂಶದವರು ವಾಸಿಸುತ್ತಿದ್ದಾರೆಯೇ ಎಂದು ರಾಮ ಲಲ್ಲಾ ವಿರಾಜಮಾನ್‌ ಪರ ವಕೀಲ ಕೆ.ಪರಾಶರನ್‌ರನ್ನು ಕೋರ್ಟ್‌ ಅಚ್ಚರಿಯಿಂದ ಪ್ರಶ್ನಿಸಿತು. ಅದಕ್ಕೆ ಪರಾಶರನ್‌ ‘ನನಗೆ ಮಾಹಿತಿ ಇಲ್ಲ. ಶೋಧಿಸಿ ನೋಡುವೆ’ ಎಂದು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next