Advertisement

ಆಸ್ತಿ ವಿವಾದ: ಸಂಬಂಧಿಯ ಗುಂಡಿನ ದಾಳಿಗೆ ಓರ್ವ ಸಾವು, ಇಬ್ಬರು ಗಂಭೀರ

11:33 AM Jul 05, 2020 | keerthan |

ಧಾರವಾಡ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಮೂರು ಸುತ್ತು ಗುಂಡು ಹಾರಿಸಿದ್ದು, ಓರ್ವ ಮೃತ ಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡದಲ್ಲಿ ಶನಿವಾರ ತಡ ರಾತ್ರಿ ನಡೆದಿದೆ.

Advertisement

ಮೃತನನ್ನ ಶಿವಯೋಗಿ ಭಾವಿಕಟ್ಟಿ (43) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಈರಣ್ಣ ಇಂಗಳ್ಳಿ ಹಾಗೂ ಸುನೀಲ ಕೋಣನ್ನವರ ಎನ್ನಲಾಗಿದೆ.

ಇಲ್ಲಿನ ಮದಿಹಾಳದಲ್ಲಿ ರಾತ್ರಿ ವೇಳೆ ಮಾತಿಗೆ ಮಾತು ಬೆಳೆದು ತನ್ನ ಅಳಿಯ ಶಿವಯೋಗಿ ಮೇಲೆ ಮಾವ ಶ್ರೀಶೈಲ ಎಂ.ಜಿ. ಅಲಿಯಾಸ್ ಡಬಲ್ ಗೋಡಾ ತನ್ನ ಪರವಾನಗಿ ಇದ್ದ ರಿವಾಲ್ವರ್ ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಶ್ರೀಶೈಲ ಮೇಲೆ ಈಗಾಗಲೇ ಕೊಲೆ ಆರೋಪ ಪ್ರಕರಣಗಳು ಇದ್ದು ರೌಡಿ ಶೀಟರ್ ತೆರೆಯಲಾಗಿದೆ. ಅತ್ಯಂತ ಜನ‌ನಿಬಿಢ ಪ್ರದೇಶವಾದ ಮದಿಹಾಳದಲ್ಲಿ ಗುಂಡಿನ ಕಾಳಗ ನಡೆದಿದ್ದರಿಂದ ಉದ್ವಿಗ್ನ ವಾತಾವರಣ ಉಂಟಾಗಿ ಜನರು ಆತಂಕದಲ್ಲಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next