Advertisement

ಮತೀಯ ದ್ವೇಷ ಹರಡಿಸುವ ರೀತಿಯ ಪ್ರಚಾರ : ಪ್ರಕರಣ ದಾಖಲು

12:22 AM Apr 03, 2024 | Team Udayavani |

ಕಾಸರಗೋಡು: ನಗರದ ಹೊರ ವಲಯದ ಹಳೆ ಸೂರ್ಲಿನ ಮದ್ರಸ ಅಧ್ಯಾಪಕ ಮೊಹಮ್ಮದ್‌ ರಿಯಾಸ್‌ ಮೌಲವಿ ಕೊಲೆ ಪ್ರಕರಣದ ಬಗ್ಗೆ ನ್ಯಾಯಾಲಯ ನೀಡಿದ ತೀರ್ಪಿಗೆ ಸಂಬಂಧಿಸಿ ಸಾಮಾಜಿಕ ಜಾಲ ತಾಣದಲ್ಲಿ ಮತೀಯ ದ್ವೇಷ ಹರಡಿಸುವ ರೀತಿಯ ಸಂದೇಶಗಳನ್ನು ರವಾನಿಸಿದ ಬಗ್ಗೆ ಕಾಸರಗೋಡು ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಮಾತ್ರವಲ್ಲ ಇಂತಹ ಸಂದೇಶವನ್ನು ಪೋಸ್ಟ್‌ ಮಾಡಿದ ಯೂ ಟ್ಯೂಬ್‌ ಐಡಿ ವಾರಸುದಾರ ಮತ್ತು ಇಂತಹ ಸಂದೇಶ ರವಾನಿಸಿದ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಿಯಾಸ್‌ ಮೌಲವಿ ಕೊಲೆ ಪ್ರಕರಣದ ತೀರ್ಪಿನ ಬಗ್ಗೆ ಸುದ್ದಿ ಜಾನೆಲ್‌ವೊಂದರಲ್ಲಿ ಬಂದ ವರದಿಯನ್ನು ಬಳಸಿ ಅದರ ಕೆಳಗೆ ಮತೀಯ ದ್ವೇಷ ಕೆರಳಿಸುವ ರೀತಿಯ ಸಂದೇಶವನ್ನು ಸಾಮಾಜಕ ಜಾಲತಾಣದಲ್ಲಿ ಪ್ರಕಟಿಸಲಾಗಿತ್ತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next