Advertisement

ಭರವಸೆ ಈಡೇರಿಸಿದ್ದೇನೆ: ಹಾಲಪ್ಪ ಆಚಾರ್‌

11:36 PM Apr 22, 2023 | Team Udayavani |

ಕುಕನೂರು: ಕಳೆದ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗೆ ತಕ್ಕಂತೆ ರೈತರ ಹೊಲಗಳಿಗೆ ನೀರು ಮತ್ತು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಜನ ಮತ್ತೂಮ್ಮೆ ಆಶೀರ್ವದಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್‌ ಮತದಾರರಲ್ಲಿ ಮನವಿ ಮಾಡಿದರು.

Advertisement

ತಾಲೂಕಿನ ಹಿರೇಬಿಡ್ನಾಳ ಗ್ರಾಮದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರಕ್ಕೆ ಅಂಟಿರುವ ಬರದ ನಾಡು ಎನ್ನುವ ಹಣೆ ಪಟ್ಟಿ ಅಳಿಸಲು ನೀರಾವರಿಯ ಸಂಕಲ್ಪ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಭರವಸೆಯಂತೆ ನನ್ನನ್ನು ಆಯ್ಕೆ ಮಾಡಿದ್ದೀರಿ. ಅದರಂತೆ ಕೃಷ್ಣಾ ಬೀ ಸ್ಕೀಮ್‌ ಯೋಜನೆಯನ್ನು ಅನುಷ್ಠಾನಗೊಳಿಸಿ ದ್ದೇನೆ. ಕ್ಷೇತ್ರದಲ್ಲಿ ನೂರಾರು ಶಾಲಾ ಕೊಠಡಿ ಗಳ ನಿರ್ಮಾಣ, ಪ್ರೌಢಶಾಲೆ, ಕಾಲೇಜ್‌ ಹಾಗೂ ಪಿಜಿ ಸೆಂಟರ್‌ ಸ್ಥಾಪಿಸಲಾಗಿದೆ. ಹಿಂದೆ ಅಧಿ ಕಾರ ಮಾಡಿದ ಕಾಂಗ್ರೆಸ್‌ನವರು ಭಾಷಣದಲ್ಲಿ ದುಬಾೖ, ಸಿಂಗಾಪುರ ತೋರಿಸುವ ರೀಲ್‌ ಬಿಟ್ಟು ಕ್ಷೇತ್ರದ ಜನರ ದಿಕ್ಕು ತಪ್ಪಿಸಿದ್ದಾರೆ. ಈಗ ಮತ್ತೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಇದಕ್ಕೆ ಜನ ಮನ್ನಣೆ ನೀಡುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next