Advertisement

ಎಂಎಸ್‌ಪಿಟಿಸಿ ಗುತ್ತಿಗೆ ರದ್ದುಗೊಳಿಸಿ

08:47 PM Nov 07, 2020 | Suhan S |

ಜಮಖಂಡಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುವ ಆಹಾರ ಪದಾರ್ಥಗಳಲ್ಲಿ ಕಳಪೆ ಗುಣಮಟ್ಟ ಕಂಡುಬರುತ್ತಿರುವುದು ಕೇಳಿ ಬಂದಿದ್ದು, ಆಹಾರ ಪೂರೈಕೆ ಮಾಡುವಎಂಎಸ್‌ಪಿಟಿಸಿ ಸಂಸ್ಥೆ ಗುತ್ತಿಗೆಯನ್ನು ಬದಲಿಸುವಂತೆ ಶಾಸಕ ಆನಂದ ನ್ಯಾಮಗೌಡ ಸಿಡಿಪಿಒ ಅವರಿಗೆ ಎಚ್ಚರಿಕೆ ನೀಡಿದರು.

Advertisement

ನಗರದ ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಇಲಾಖಾವಾರುಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಿಡಿಪಿಒ ಅನುರಾಧಾ ಹಾದಿಮನಿ ಅವರಿಗೆ ಸೂಚನೆ ನೀಡಿದರು. ಅವಳಿ ತಾಲೂಕಿನಲ್ಲಿರುವ 295 ಅಂಗನವಾಡಿ ಕೇಂದ್ರಗಳಲ್ಲಿ 28933 ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾದರೇ ಆರೋಗ್ಯದ ಸ್ಥಿತಿ ಬಗ್ಗೆ ಚಿಂತನೆ ನಡೆಸಬೇಕು. ಈಗಾಗಲೇ ತಾಲೂಕಿನ 33 ಮಕ್ಕಳು ಅಪೌಷ್ಟಿಕತೆ ಕೊರತೆಯಿಂದ ಬಳಲುತ್ತಿದ್ದು, ಇವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅಪೌಷ್ಟಿಕತೆ ಕೊರತೆ ಮಕ್ಕಳು ತಾಲೂಕಿನಲ್ಲಿ ಕಂಡು ಬರುವ ಮುನ್ನ ಅಂತಹ ಮಕ್ಕಳನ್ನು ಗುರ್ತಿಸಿ ಅವರಿಗೆ ಪೌಷ್ಟಿಕ ಆಹಾರ ಸಿಗುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ಅವಳಿ ತಾಲೂಕಿನಲ್ಲಿ ಸೇವೆ ಸಲ್ಲಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ಮೂರು ತಿಂಗಳಿಂದ ವೇತನ ಸಿಕ್ಕಿಲ್ಲ. ವೇತನಕ್ಕಾಗಿ ನ. 11ರಂದು ಸತ್ಯಾಗ್ರಹ ನಡೆಸುವುದಾಗಿ ಪತ್ರ ನೀಡಿದ್ದು, ತಾಪಂ ಇಲಾಖೆ ವೇತನ ಮಂಜೂರು ಮಾಡಬೇಕು ಎಂದರು. ಅದಕ್ಕೆ ಉತ್ತರಿಸಿದ ತಾಪಂ ಇಒ ಅಬೀದ ಗದ್ಯಾಳ ಈಗಾಗಲೇ ಸರ್ಕಾರದ ಅನುದಾನ ಬಿಡುಗಡೆಯಾಗಿದ್ದು, ಇನ್ನೇರೆಡು ದಿನಗಳಲ್ಲಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದರು.

ಕಳೆದ ತಿಂಗಳು ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ ಪ್ಯಾಕೇಟ್‌ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದನ್ನು ಕೂಡಲೇ ಪತ್ತೆ ಹಚ್ಚಲು ಇಲಾಖೆ ಮುತುವರ್ಜಿ ವಹಿಸಿ ಆರೋಪಿಗಳ ಪತ್ತೆ ನಡೆಸಬೇಕೆಂದು ಶಾಸಕರು ಸೂಚಿಸಿದರು. ತಾಲೂಕಾ ವೈದ್ಯಾಧಿಕಾರಿ ಡಾ|ಗೈಬುಸಾಬ ಗಲಗಲಿ ಮಾತನಾಡಿ, ತಾಲೂಕಿನಲ್ಲಿ ಹೊಸದಾಗಿ 34 ಎಚ್‌ಐವಿರೋಗಿಗಳು ಪತ್ತೆಯಾಗಿದ್ದು, ರೋಗಿಗಳಿಗೆ ಔಷಧೋಪಚಾರ ನೀಡಲಾಗಿದೆ. ತಾಲೂಕಿನಲ್ಲಿ 19544 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 1212 ಖಚಿತಗೊಂಡಿದೆ. ತಾಲೂಕಿನ ಸಾವಳಗಿ ಮತ್ತು ಕೊಣ್ಣೂರಪ್ರಾಥಮಿಕ ಆರೋಗ್ಯ ಕೇಂದ್ರಗಳುಅವ್ಯವಸ್ಥೆ ಆಗರವಾಗಿದ್ದು, ಕೂಡಲೇ ಅವನ್ನು ಸರಿಪಡಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧಿ ಸಂಗ್ರಹವಿದ್ದರೂ ಕೊರತೆ ಇದೆ ಎಂದು ರೋಗಿಗಳಿಗೆ ಹೊರಗಡೆಯಿಂದ ಔಷಧಿ ಖರೀದಿಗೆ ಹೇಳಿತ್ತಿರುವುದು ತಪ್ಪು.ವೈದ್ಯರು ರೋಗಿಗಳೊಂದಿಗೆ ಸರಿಯಾಗಿ ವರ್ತಿಸಿ ಅವರಿಗೆ ಸ್ಪಂದಿಸಿ ಉಪಚರಿಸಬೇಕು ಎಂದು ಸೂಚಿಸಲಾಯಿತು.

ಸಭೆಯಲ್ಲಿ ತಾಪಂ ಆಧ್ಯಕ್ಷೆ ಸುಜಾತಾಕಲ್ಯಾಣಿ, ಉಪಾಧ್ಯಕ್ಷೆ ಸಂದರವ್ವ ಬೆಳಗಲಿ, ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next