Advertisement

ಬಿಲವರ ಅಸೋಸಿಯೇಶನ್‌ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ

06:40 PM Jan 31, 2021 | Team Udayavani |

ಮುಂಬಯಿ, : ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಹಿಳಾ ವಿಭಾಗದ ವತಿ ಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಜ. 25ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದ ಸಭಾಗೃಹದಲ್ಲಿ ನಡೆಯಿತು.

Advertisement

ಬಿಲ್ಲವ ಭವನದ ತಳಮಾಳಿಗೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಮೂರ್ತಿಗೆ ಹಾರಾರ್ಪಣೆ ಮಾಡಿ, ದೀಪ ಬೆಳಗಿಸಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌ ಅವರ ನೇತೃತ್ವದಲ್ಲಿ ಮುಖ್ಯ ಅತಿಥಿ ಶುಭಮಂಗಳ ಉಪಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ ಬೇಬಿ ಕುಕ್ಯಾನ್‌, ಸಮಾಜ ಸೇವಕಿ ಯಶೋದಾ ಎನ್‌. ಟಿ.ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ  ವಿ. ಉಳ್ಳಾಲ್‌ ಸ್ವಾಗತಿಸಿ, ಅತಿಥಿ-ಗಣ್ಯರನ್ನು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಿದರು. ಈ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಶನ್‌ ಮಹಿಳಾ ವಿಭಾಗದ ಸದಸ್ಯೆಯರಿಂದ ಹಾಗೂ ಧಾರ್ಮಿಕ ಉಪಸಮಿತಿಯ ಸದಸ್ಯೆಯರಿಂದ ಭಜನ ಕಾರ್ಯಕ್ರಮ ಜರಗಿತು.

ಲತಾ ಬಂಗೇರ ಅವರಿಂದ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿ ಬೇಬಿ ಕುಕ್ಯಾನ್‌ ಅವರ  ಮಾತನಾಡಿ, ಮಹಿಳೆಯರು ಸಮಾಜಮುಖೀ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ತಮ್ಮಿಂದಾ ಅಳಿಲು ಸೇವೆಯನ್ನು ಮಾಡಬೇಕು ಎಂದು ಕರೆಯಿತ್ತರು.

ಇದನ್ನೂ ಓದಿ:ಸಂಬಂಧಗಳಿಗೆ ಸ್ವಲ್ಪ ಸೈಕಾಲಜಿ ಟಚ್

Advertisement

ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌ ಮಾತನಾಡಿ, ಮಹಿಳೆಯರ ಉನ್ನತಿಯೇ ನಮ್ಮ ಶಕ್ತಿಯಾಗಿದೆ ಎಂದರು. ಭಾಗವಹಿಸಿದ ನೂರಾರು ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್‌. ಬಂಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭ ಮಹಿಳಾ ವಿಭಾಗದ ಸದಸ್ಯರಾದ ಲಕ್ಷ್ಮೀ ಪೂಜಾರಿ, ವಿಲಾಸಿನಿ ಕೆ. ಸಾಲ್ಯಾನ್‌, ರೇಖಾ ಸದಾನಂದ, ಸುಜಾತಾ ಡಿ. ಪೂಜಾರಿ, ರೋಹಿಣಿ ಎಸ್‌. ಪೂಜಾರಿ, ಪುಷ್ಪಾ ಎಸ್‌. ಅಮೀನ್‌, ಪ್ರೇಮಾ ಪೂಜಾರಿ, ಭವಾನಿ ಪೂಜಾರಿ, ವತ್ಸಲಾ ಕೆ. ಪೂಜಾರಿ, ಬಬಿತಾ ಜೆ. ಕೋಟ್ಯಾನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next