Advertisement

ಪ್ರೊ|ಮಹೇಂದ್ರ ಮಣಿರಾವ್‌ ಅವರಿಗೆ ಬೀಳ್ಕೊಡುಗೆ

06:42 PM Apr 10, 2019 | Team Udayavani |

ಮಹಾನಗರ: ವಿಶ್ವವಿದ್ಯಾ ನಿಲಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಿಕೆ ಪ್ರೊ|ಮಹೇಂದ್ರ ಮಣಿರಾವ್‌ ಅವರಿಗೆ ಇತ್ತೀಚೆಗೆ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಜರಗಿತು.

Advertisement

ಇದೇ ವೇಳೆ ಮಾತನಾಡಿದ ಪ್ರೊ|ಮಹೇಂದ್ರ ಮಣಿರಾವ್‌, ಮರೆವು ಎಲ್ಲ ವನ್ನೂ ಮರೆತು ಹೊಸ ಜೀವನದಲ್ಲಿ ಸಾಗ ಲು ಅನುವು ಮಾಡಿಕೊಡುತ್ತದೆ ಎಂದರು.

ಬೋಧಕ ಮತ್ತು ಬೋಧಕೇತರ ಸಿಬಂದಿ. ತಮ್ಮ ಸಹೋದ್ಯೋಗಿಯ ಜತೆ ಹಂಚಿಕೊಂಡ ಕ್ಷಣಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿಗಳೂ, ಮಹೇಂದ್ರ ಮಣಿಯವರಿಗೆ ಶುಭ ಹಾರೈಸಿದರು. ಪ್ರಾಧ್ಯಾಪಿಕೆಗೆ ಅವರದೇ ವರ್ಣಚಿತ್ರವನ್ನು ಉಡುಗೊರೆ ನೀಡಿದರು.

ಕಾಲೇಜಿನ ವತಿಯಿಂದ ಮಹೇಂದ್ರ ಮಣಿ ಯವರನ್ನು ಸಮ್ಮಾನಿಸಲಾಯಿತು. ಪ್ರಾಂಶುಪಾಲ ಡಾ| ಉದಯಕುಮಾರ್‌ ಎಂ.ಎ. ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕಿ ಗಾಯತ್ರಿ ಸ್ವಾಗತಿಸಿ, ಸ್ಫೂರ್ತಿ ನಿರೂಪಿಸಿದರು. ಮಣಿಕಂಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next