Advertisement

MB Patil ತುಚ್ಛ ಮಾತು ಯತ್ನಾಳ ಮನೆತನದ ಸಂಸ್ಕೃತಿ ಅಲ್ಲ

07:24 PM Sep 15, 2024 | Shreeram Nayak |

ವಿಜಯಪುರ: ಯಾರದ್ದೊ ತಂದೆ-ತಾಯಿ ಬಗ್ಗೆ ಮಾತನಾಡುವುದು, ಯಾರಿಗೆ ಹುಟ್ಟಿದ್ದಾರೆ ಎಂದು ಮಾತನಾಡುವುದು ಯತ್ನಾಳ ಮನೆತನದ ಸಂಸ್ಕೃತಿ ಅಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕುರಿತು ತುಚ್ಛವಾಗಿ ಮಾತನಾಡುವುದು ಸರಿಯಲ್ಲ. ಬಾಯಿ, ನಾಲಿಗೆ ಮೇಲೆ ಸ್ವಲ್ಪ ಹಿಡಿತ ಇರಬೇಕು. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಇದನ್ನು ಇಲ್ಲಿಗೆ ನಿಲ್ಲಿಸಲಿ. ವೈಯಕ್ತಿಕವಾಗಿ ಮಾತನಾಡುವುದು ನಮ್ಮ ಸಂಸ್ಕೃತಿಯಲ್ಲ. ವಿಜಯಪುರ ಜಿಲ್ಲೆಯ ಸಂಸ್ಕೃತಿಯೂ ಅಲ್ಲ. ಯತ್ನಾಳ ಮನೆತನದ ಸಂಸ್ಕೃತಿ ಕೂಡ ಅಲ್ಲ. ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next