Advertisement

ಪ್ರೊ|ಭಾಸ್ಕರ್‌ ಅಧಿಕಾರ ಸ್ವೀಕಾರ

11:05 AM Feb 02, 2020 | Suhan S |

ಧಾರವಾಡ: ಕವಿವಿ ಪ್ರಭಾರ ಕುಲಪತಿಗಳಾಗಿ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ, ಕಲಾ ನಿಖಾಯದ ಡೀನ್‌ ಪ್ರೊ| ಟಿ.ಎಂ.ಭಾಸ್ಕರ್‌ ಅಧಿಕಾರ ಸ್ವೀಕರಿಸಿದರು.

Advertisement

ಜೇಷ್ಠತೆಯ ಆಧಾರದ ಮೇಲೆ ವಾಣಿಜ್ಯ ವಿಭಾಗದ ಡೀನ್‌ ಆಗಿದ್ದ ಪ್ರೋ | ಎ.ಎಸ್‌. ಶಿರಾಳಶೆಟ್ಟಿ ಅವರು ಕಳೆದ 2019 ಜೂನ್‌ನಿಂದ ಕವಿವಿಯ ಪ್ರಭಾರ ಕುಲಪತಿಯಾಗಿ ಸೇವೆಯಲ್ಲಿದ್ದರು. 2008ರಲ್ಲಿ ಪ್ರಾಧ್ಯಾಪಕರಾಗಿ ಕವಿವಿ ಡಾ|ಆರ್‌.ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಸೇವೆ ಆರಂಭಿಸಿದ್ದ ಇವರು 2015 ರಿಂದ 2017ರವರೆಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಕುಲಸಚಿವರಾದ ಸೇವೆ ಸಲ್ಲಿಸಿದ್ದಾರೆ. ಕವಿವಿ ಹಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ, ಡಾ| ಎಂ.ಎಂ. ಕಲಬುರ್ಗಿ ಅಧ್ಯಯನ ಕೇಂದ್ರದ ಸಂಯೋಜಕರಾಗಿ, ಕನ್ನಡ ವಿಭಾಗದ ಅಧ್ಯಕ್ಷರಾಗಿ, ಪ್ರಸ್ತುತ ಕವಿವಿಯ ಕಲಾ ನಿಖಾಯದ ಡೀನ್‌ರಾಗಿ ವಿವಿಧ ವಿಭಾಗಗಳ ಸಂಯೋಜಕರಾಗಿ ಅನುಭವ ಹೊಂದಿದ್ದಾರೆ.

ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ವಜ್ರಖಾನ ಸಲಗರ ಎಂಬ ಗ್ರಾಮದಲ್ಲಿ ಜನಿಸಿದ್ದ ಪ್ರೋ|ಟಿ.ಎಂ. ಭಾಸ್ಕರ್‌, ಕನ್ನಡ ಭಾಷಾ ಪಂಡಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next