Advertisement

ಹೋಟೆಲ್‌ಗ‌ಳ ತ್ಯಾಜ್ಯದಿಂದ ಕಾಂಪೋಸ್ಟ್‌ ಗೊಬ್ಬರ ಉತ್ಪತಿ

04:53 PM Oct 12, 2019 | Team Udayavani |

ಕನಕಪುರ: ಮನೆಗಳಲ್ಲಿ ಹೋಟೆಲ್‌ಗ‌ಳು ಬಾರ್‌ ಅಂಡ್‌ ರೆಸ್ಟೋರೆಂಟ್‌ ಕ್ಯಾಟರಿಂಗ್‌ ಬೀದಿಬದಿಯ ಕ್ಯಾಂಟೀನ್‌ಗಳು ಉತ್ಪಾದಿಸುವ ತ್ಯಾಜ್ಯವನ್ನು ಹೋಂ ಕಾಂಪೋಸ್ಟ್  ಬಿನ್‌ ತ್ಯಾಜ್ಯ ಸಂಸ್ಕರಣ ಘಟಕದ ಮೂಲಕ ಗೊಬ್ಬರವನ್ನಾಗಿ ಪರಿವರ್ತಿಸಬಹುದು ಎಂದು ನಗರಸಭೆಯ ಆರೋಗ್ಯಾಧಿಕಾರಿ ಕುಸುಮ ತಿಳಿಸಿದರು.

Advertisement

ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರಯೋಗಿಕವಾಗಿ ಗ್ರೀನ್‌ ರಿಚ್‌ ಕಂಪನಿಯ ಹೋಂ ಕಂಪೋಸ್ಟ್  ಬಿನ್‌ ಎಂಬ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಖಾಸಗಿ ಹೋಟೆಲ್‌ ಕಲ್ಯಾಣ ಮಂಟಪ ಬೀದಿಬದಿಯ ಕ್ಯಾಂಟೀನ್‌ಗಳು ಸೇರಿದಂತೆ ಹೆಚ್ಚು ಘನತ್ಯಾಜ್ಯವನ್ನು ಉತ್ಪಾದಿಸುವ ಸ್ಥಳಗಳಲ್ಲಿ ತ್ಯಾಜ್ಯ ಸಂಸ್ಕರಣ ಘಟಕವನ್ನು ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಹಾಗೂ ಘನತ್ಯಾಜ್ಯ ವಿಲೇವಾರಿ ಕಾಯ್ದೆ ಪ್ರಕಾರ ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದೆ ರಸ್ತೆಬದಿಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವವರಿಗೆ ದೊಡ್ಡ ಮೊತ್ತದ ದಂಡ ವಿಧಿಸುವ ಅವಕಾಶವಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಹೋಟೆಲ್‌ ಮಾಲೀಕರಿಗೆ ತ್ಯಾಜ್ಯಾ ಸಂಸ್ಕರಣೆ ಬಗ್ಗೆ ತಿಳುವಳಿಕೆ ಮೂಡಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರಾಯೋಗಿಕವಾಗಿ ಇಂದಿರಾ ಕ್ಯಾಂಟೀನ್ನಲ್ಲಿ ತ್ಯಾಜ್ಯ ಸಂಸ್ಕರಣ ಘಟಕವನ್ನು ಅಳವಡಿಸಲಾಗಿದೆ

ಹೋಟೆಲ್‌ಗ‌ಳಲ್ಲಿ ಉತ್ಪಾದಿಸುವ ತರಕಾರಿ ಉಳಿದ ಆಹಾರ ಗಳಂತಹ ಹಸಿತ್ಯಾಜ್ಯಕ್ಕೆ ಸಗಣಿ ನೀರು ಅಥವಾ ಕೊಕ್‌ ಪೌಡರ್‌ ಮಿಶ್ರಣ ಮಾಡಿ 20 ಕೆಜಿ ಯಷತ್ಯಾಜ್ಯವನ್ನು ಹಾಕಿ ಹದಿನೈದು ದಿನಗಳ ನಂತರ ಉತ್ತಮವಾದ ಸಾವಯವ ಗೊಬ್ಬರವನ್ನೂ ಪಡೆಯಬಹುದು ಸದರಿ ಗೊಬ್ಬರವನ್ನು ಬೆಳೆಗಳಿಗೆ ಬಳಸಬಹುದು ಎಂದರು. ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿ ಸಿದ್ದರಾಮಯ್ಯ ಮತ್ತು ಇಂದಿರಾ ಕ್ಯಾಂಟೀನ್‌ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next