Advertisement

ನಾನು ದರ್ಶನ್ ಅವರನ್ನು ಅಣ್ಣ ಎಂದು ಹೇಳಿದ್ದೇನೆ : ಉಮಾಪತಿ

01:35 PM Jul 17, 2021 | Team Udayavani |

ಬೆಂಗಳೂರು: ತಮ್ಮ ವಿರುದ್ಧ ಆರೋಪಗಳು ಎದುರಾಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ದರ್ಶನ್​ ಮತ್ತು ನನ್ನ ನಡುವೆ ಯಾವುದೇ ವೈರತ್ವ ಇಲ್ಲ. ಅವರು ನನ್ನನ್ನು ನಮ್ಮ ನಿರ್ಮಾಪಕ ಎಂದು ಕರೆದಿದ್ದಾರೆ. ನಾನು ಅವರನ್ನು ಅಣ್ಣ ಎಂದು ಹೇಳಿದ್ದೇನೆ ಎಂದಿದ್ದಾರೆ.

Advertisement

ಇಂದು (ಜುಲೈ 17) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಉಮಾಪತಿ, ‘ನನ್ನ ವಿರುದ್ಧ ಆರೋಪ ಮಾಡುವವರೇನು ಸಾಚಾಗಳಲ್ಲ. ನಾನು ಈ ಘಟನೆಗಳಿಂದ ಪಾಠ ಕಲಿತುಕೊಂಡೆ. ದುಡ್ಡು ನೀಡಿ ಕೆಲಸ ಮಾಡಿಕೊಂಡ ನಂತರ ಅಲ್ಲಿಗೇ ಬಿಡಬೇಕು. ಮತ್ತೊಬ್ಬರನ್ನು ಉದ್ಧಾರ ಮಾಡಲು ಹೋದರೆ ಇಂತಹ ಪರಿಸ್ಥಿತಿಗಳು ಎದುರಾಗುತ್ತವೆ ಎಂದಿದ್ದಾರೆ.

ನನ್ನ ತೇಜೋವಧೆ ಮಾಡಿಯಾಗಿದೆ. ಇನ್ನೇನೂ ಉಳಿದಿಲ್ಲ. ಆದರೆ ಈ ವಿಚಾರಗಳಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದಲೇ ನ್ಯಾಯಾಲಯದಿಂದ ಸ್ಟೇ ತರದೇ ಎಲ್ಲವನ್ನೂ ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೆಸರಿನಲ್ಲಿ ವಂಚನೆಗೆ ಯತ್ನ ನಡೆದ ಪ್ರಕರಣ ಬೆಳೆಕಿಗೆ ಬಂದ ನಂತರ ಹಲವು ಬೆಳವಣೆಗೆ ನಡೆದವು. ನಿರ್ಮಾಪಕ ಉಮಾಪತಿ ಮತ್ತು ದರ್ಶನ್ ಸ್ನೇಹದ ನಡುವೆ ಬಿರುಕು ಕೂಡ ಮೂಡಿದೆ ಎನ್ನುವ ಮಾತುಗಳು ಕೇಳಿ ಬಂದವು. ದರ್ಶನ್ ಅವರೇ ಈ ಪ್ರಕರಣಕ್ಕೆ ಅಂತ್ಯ ಹಾಡಲು ಯತ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next