Advertisement

Cinema: ಮೈಸೂರಲ್ಲೇ ಚಿತ್ರನಗರಿ ನಿರ್ಮಾಣ- ಸಿದ್ದರಾಮಯ್ಯ

11:55 PM Dec 23, 2023 | Team Udayavani |

ಮೈಸೂರು: ನಗರದ ಅಭಿವೃದ್ಧಿ, ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಮೈಸೂರಿನಲ್ಲಿಯೇ ಚಿತ್ರನಗರಿ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದಲ್ಲಿ ಶನಿವಾರ ನಡೆದ ಹೊಟೇಲ್‌ ಮಾಲಕರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಹೊಟೇಲ್‌ ಮಾಲಕರ ಸಂಘದ ಬೇಡಿಕೆಯಂತೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ಮೈಸೂರಿನಲ್ಲೇ ಚಿತ್ರನಗರಿ ಸ್ಥಾಪನೆ ಮಾಡಲಾಗುವುದು ಎಂದರು.

Advertisement

ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಮಾಡಲು ನಮ್ಮ ಸರಕಾರ ಈ ಹಿಂದೆಯೇ ನಿರ್ಧರಿಸಿತ್ತು. ಆದರೆ, ಪರಿಸರವಾದಿಗಳ ವಿರೋಧದಿಂದ ಸಾಧ್ಯವಾಗಲಿಲ್ಲ. ಈಗಲೂ ಯಾರೂ ಅಡ್ಡಿಪಡಿಸದಿದ್ದರೆ ಬೆಟ್ಟಕ್ಕೆ ರೋಪ್‌ ವೇ ಮಾಡಲು ಸಿದ್ಧ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next