Advertisement

ಲಾಕ್‌ ಡೌನ್‌ ಉಲ್ಲಂಘಿಸಿದರೆ ಕಾನೂನು ಕ್ರಮ

04:14 PM May 25, 2021 | Team Udayavani |

ಕಲಬುರಗಿ: ಗ್ರಾಮೀಣ ಭಾಗದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿ ತಹಶೀಲ್ದಾರ್‌ ಪ್ರಕಾಶ ಕುದರಿ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಟಾಸ್ಕ್ಫೋರ್ಸ್‌ ಸಭೆ ನಡೆಸುತ್ತಿದ್ದಾರೆ.

Advertisement

ತಾಜ ಸುಲ್ತಾನ್‌ಪುರ, ಅವರಾದ (ಬಿ) ಹಾಗೂ ಹರಸೂರ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಟಾಸ್ಕ್ಫೋರ್ಸ್‌ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ತಹಶೀಲ್ದಾರ ಕುದರಿ, ಕೊರೊನಾ ಸೋಂಕಿತರಿಗೆ ಕೋವಿಡ್‌ ಕೇರ್‌ ಗೆ ಸೆಂಟರ್‌ ಸೇರಿಸುವಂತೆ ಸೂಚಿಸುವುದಲ್ಲದೇ ಸೋಂಕಿತರ ಸಂಪರ್ಕದಲ್ಲಿದ್ದವರಿಗೆ ತೀವ್ರ ನಿಗಾ ವಹಿಸಲು ಎಲ್ಲರೂ ಹಗಲಿರಳು ಶ್ರಮಿಸಬೇಕೆಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೇಖಪಾಲಕರು, ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗೆ ಸೂಚನೆ ನೀಡಿದರು. ಕೋವಿಡ್‌ ಪಾಸಿಟಿವ್‌ ಬಂದಿರುವ ವ್ಯಕ್ತಿಗಳನ್ನು ಮನೆಯಲ್ಲಿ ಪ್ರತ್ಯೇಕವಾಗಿಸಬೇಕು.

ಲಕ್ಷಣಗಳನ್ನು ಕಂಡು ಬಂದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಗೆ ದಾಖಲಿಸಿ, ವೈದ್ಯಾಧಿ ಕಾರಿಗಳು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಗ್ರಾಪಂ ಸಿಬ್ಬಂದಿ ಸಾರ್ವಜನಿಕರ ಮೇಲೆ ನಿಗಾವಹಿಸಬೇಕು. ಸದಾ ಉತ್ತಮ ಹಾಗೂ ಸ್ವತ್ಛವಾದ ಮಾಸ್ಕ್ ಬಳಸಬೇಕು ಎಂದು ತಹಶೀಲ್ದಾರ್‌ ಸಲಹೆ ನೀಡಿದರು. ತಾಪಂ ಇಒ ಮಾನಪ್ಪ ಕಟ್ಟಿಮನಿ, ಗ್ರಾಪಂ ಅಧ್ಯಕ್ಷ ಸುನಿಲ ಮದನಕರ್‌, ಉಪಾಧ್ಯಕ್ಷ ಸಾಯಿದ್‌ಬಿ ಮದಲೆಸಾಬ, ಡಿಎಸ್‌-1 ಎಂ.ಡಿ. ಇಸ್ಮಾಯಿಲಸಾಬ, ಉಪ ತಹಶೀಲ್ದಾರ್‌ ಶ್ರೀಮಂತ ಪಟ್ಟೇದಾರ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಪಾಟೀಲ, ಗ್ರಾಮಲೇಖಪಾಲಕ ಪ್ರಶಾಂತ ದೊಬಿ ಸೇರಿದಂತೆ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next