Advertisement

ಕಣ್ಣೀರಿನಿಂದ ಸಮಸ್ಯೆ ಬಗೆಹರಿಯಲ್ಲ

06:45 AM Jul 17, 2018 | |

ಮೈಸೂರು: “ಮುಖ್ಯಮಂತ್ರಿಯಾದವರು ಜನರ ಕಣ್ಣೀರು ಒರೆಸಬೇಕೆ ವಿನಾ, ಅವರೇ ಜನರ ಎದುರು ಕಣ್ಣೀರು ಹಾಕಬಾರದು. ಕಣ್ಣೀರು ಹಾಕುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ’ ಎಂದು ಮಾಜಿ ಸಚಿವ ಎ.ಮಂಜು ಲೇವಡಿ ಮಾಡಿದರು. 

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿಯಾಗಿ ನಾನು ಸಂತೋಷವಾಗಿಲ್ಲ. ಅನಿವಾರ್ಯವಾಗಿ ವಿಷಕಂಠನಂತಿದ್ದೇನೆ ಎಂದು ಕುಮಾರಸ್ವಾಮಿ ಕಣ್ಣೀರು ಹಾಕುವುದನ್ನು ಕಂಡಿದ್ದೇನೆ. ಕಾಂಗ್ರೆಸ್‌ನೊಂದಿಗೆ ಸಮ್ಮಿಶ್ರ ಸರ್ಕಾರದಲ್ಲಿರುವ ಕುಮಾರಸ್ವಾಮಿ ಅವರು ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಗದೆ ಕಣ್ಣೀರು ಹಾಕುತ್ತಿರುವುದು ಸರಿಯಲ್ಲ. ಸಮ್ಮಿಶ್ರ ಸರ್ಕಾರ ಎಂಬುದು ಸಂಸಾರವಿದ್ದಂತೆ, ಹೀಗಾಗಿ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಮೂಲಕ ಆಡಳಿತ ನಡೆಸಬೇಕು. ಯಾವುದೇ ಸಮಸ್ಯೆಗಳು ಬಂದರೂ ಅದನ್ನು ಎದುರಿಸಬೇಕು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next