Advertisement

Pakistan ಪರ ಘೋಷಣೆ ದೇಶದ್ರೋಹ: ನ್ಯಾ| ಸಂತೋಷ ಹೆಗ್ಡೆ

12:38 AM Mar 11, 2024 | Team Udayavani |

ಬಾಗಲಕೋಟೆ: ವಿಧಾನಸೌಧದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿರುವ ಘಟನೆ ದೇಶದ್ರೋಹ. ಇದಕ್ಕೆ ಸಚಿವರು ಅಥವಾ ಬೇರೆ ಯಾರೂ ಪ್ರತಿಕ್ರಿಯೆ ಕೊಡಬೇಕಿಲ್ಲ. ಈ ಘಟನೆಯಲ್ಲಿ ಭಾಗಿಯಾದವರಿಗೆ ಕೂಡಲೇ ಶಿಕ್ಷೆ ಆಗಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾ| ಸಂತೋಷ ಹೆಗ್ಡೆ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಶಾಂತಿ, ಸೌಹಾರ್ದ ಇರಬೇಕು. ದೇಶ ಮೊದಲು ಎನ್ನುವುದು ನಮ್ಮ ಮನಸ್ಸಿನಲ್ಲಿರಬೇಕು. ಅದು ಉಲ್ಲಂಘನೆಯಾದರೆ ಕಠಿನ ಶಿಕ್ಷೆ ಆಗಬೇಕು. ಪಾಕ್‌ ಪರ ಘೋಷಣೆ ಕೂಗಿದ್ದಕ್ಕೂ ರಾಜ್ಯಸಭೆಗೆ ಆಯ್ಕೆಯಾದವರಿಗೂ ಸಂಬಂಧವಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next