Advertisement

ಪಾಕ್‌ ಪರ ಘೋಷಣೆ  ಇಬ್ಬರಿಗೆ ಧರ್ಮದೇಟು

12:30 AM Mar 04, 2019 | |

ಬೆಳಗಾವಿ: ನಗರದ ಕಾಮತ ಗಲ್ಲಿಯಲ್ಲಿ ಭಾನುವಾರ ಪಾಕ್‌ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿದ
ಯುವಕರನ್ನು ಸಾರ್ವಜನಿಕರು ಬೆನ್ನತ್ತಿ ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದು, ಇಬ್ಬರು ಯುವಕರು ಪರಾರಿಯಾಗಿದ್ದಾರೆ.ವೀರಭದ್ರ ನಗರ ಅಸದಖಾನ್‌ ಸೊಸೈಟಿ ನಿವಾಸಿ ಸೈಫ್‌ ಅಯೂಬ್‌ ಪಟೇಲ್‌ (22), ಕಲೈಗಾರ ಗಲ್ಲಿಯ ಅಯೂಬ್‌ ಬಸೀರ್‌ ಮುಲ್ಲಾ (19) ಧರ್ಮದೇಟು ತಿಂದಿದ್ದಾರೆ.

Advertisement

ಪೋರ್ಟ್‌ ರಸ್ತೆಯಲ್ಲಿರುವ ಡಿಸಿ ಬ್ಯಾಂಕ್‌ ಪಕ್ಕದ ಕಾಮತ ಗಲ್ಲಿಯಲ್ಲಿ ನಾಲ್ವರು ಯುವಕರು ಸೇರಿ ಪಟಾಕಿ ಸಿಡಿಸಿದ್ದಾರೆ. ನಂತರ “ಪಾಕಿಸ್ತಾನ ಜಿಂದಾಬಾದ್‌’ ಘೋಷಣೆ ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಬೆನ್ನತ್ತಿ ಇಬ್ಬರನ್ನು ಹಿಡಿದು ಕೈಗೆ ಹಗ್ಗ ಕಟ್ಟಿ ಧರ್ಮದೇಟು ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ
ಮಾರ್ಕೆಟ್‌ ಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next