Advertisement
ಇಲ್ಲಿನ ಶ್ರೀಶಿವಛತ್ರಪತಿ ನ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರೈಡರ್ಗಳಾದ ಸಿದ್ಧಾರ್ಥ್ ದೇಸಾಯಿ (9 ಅಂಕ) ಹಾಗೂ ರೋಹಿತ್ ಬಲಿಯಾನ್ (8 ಅಂಕ) ಶ್ರೇಷ್ಠ ರೈಡಿಂಗ್ ಪ್ರದರ್ಶನ ನೀಡಿದರು. ಇಬ್ಬರು ಸೇರಿಕೊಂಡು ಒಟ್ಟಾರೆ 17 ಅಂಕವನ್ನು ತಂಡಕ್ಕೆ ಕೊಡುಗೆಯಾಗಿ ನೀಡಿದರು. ಫಜಲ್ ಅಟ್ರಾಚಲಿ (4 ಅಂಕ) ಹಾಗೂ ಸುರೇಂದರ್ ಸಿಂಗ್ (4 ಅಂಕ) ಮನಮೋಹಕ ಟ್ಯಾಕಲ್ ಮೂಲಕ ತಂಡಕ್ಕೆ ಅಗತ್ಯವಾಗಿದ್ದ ಅಂಕವನ್ನು ತಂದುಕೊಟ್ಟರು, ಒಟ್ಟಾರೆ ಮುಂಬೈ ಆಲ್ರೌಂಡರ್ ಆಟವಾಡುವುದರ ಮೂಲಕ ಪಂದ್ಯ ಗೆದ್ದಿತು. ವಲಯ “ಎ”ನ ಅಗ್ರಸ್ಥಾನಿಯಾಯಿತು. ದಿಲ್ಲಿ ತಂಡವನ್ನು ಗೆಲ್ಲಿಸಲು ಚಂದ್ರನ್ ರಂಜಿತ್ (7 ಅಂಕ) ಹಾಗೂ ನವೀನ್ ಕುಮಾರ್ (4 ಅಂಕ) ರೈಡಿಂಗ್ ಮೂಲಕ ಪ್ರಯತ್ನ ನಡೆಸಿದರಾದರು ಸಾಧ್ಯವಾಗಲಿಲ್ಲ. Advertisement
ಪ್ರೊ ಕಬಡ್ಡಿ: ಯು ಮುಂಬಾಗೆ ಗೆಲುವು
06:15 AM Nov 25, 2018 | |
Advertisement
Udayavani is now on Telegram. Click here to join our channel and stay updated with the latest news.