Advertisement

ಪ್ರೊ ಕಬಡ್ಡಿ: ತಮಿಳ್‌-ಹರ್ಯಾಣ ಪಂದ್ಯ ಟೈ

06:00 AM Nov 15, 2018 | Team Udayavani |

ಮುಂಬೈ: ಇಲ್ಲಿನ ಎನ್‌ಎಸ್‌ಸಿಐ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಆರನೇ ಆವೃತ್ತಿ ಪ್ರೊ ಕಬಡ್ಡಿ ಕೂಟದ ಮುಂಬೈ ಚರಣದ ತಮಿಳ್‌ ತಲೈವಾಸ್‌ ಮತ್ತು ಹರ್ಯಾಣ ಸ್ಟೀಲರ್ ನಡುವಿನ ಪಂದ್ಯ 32-32 ಅಂಕಗಳ ರೋಚಕ ಟೈನಲ್ಲಿ ಅಂತ್ಯವಾಯಿತು.

Advertisement

ಬುಧವಾರ ನಡೆದ ಪಂದ್ಯದಲ್ಲಿ ಎರಡು ತಂಡಗಳ ಜಿದ್ದಾಜಿದ್ದಿನ ಸೆಣಸಾಟ ಕೊನೆಗೆ ನೀರಸ ಟೈನಲ್ಲಿ ಅಂತ್ಯವಾಗಿದ್ದು ಉಭಯ ತಂಡದ ಅಭಿಮಾನಿಗಳಿಗೆ ಭಾರೀ ನಿರಾಸೆ ತರಿಸಿತು. ಪಂದ್ಯದ ಆರಂಭದಲ್ಲಿ ತಮಿಳ್‌ ತಲೈವಾಸ್‌ 4-1 ಅಂಕಗಳ ಅಂತರದಿಂದ ಮುನ್ನಡೆ ಸಾಧಿಸಿತ್ತು. ಜಸ್ವೀರ್‌ ಸಿಂಗ್‌ ಹಾಗೂ ಅಜಯ್‌ ಠಾಕೂರ್‌ ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟಿದ್ದರು. ಆದರೆ ಹರ್ಯಾಣ ಸ್ಟೀಲರ್ ನಂತರದ ಅವಧಿಯಲ್ಲಿ ಪ್ರಬಲ ಆಟ ಪ್ರದರ್ಶಿಸಿ ಮೇಲುಗೈ ಸಾಧಿಸಿಕೊಂಡಿತು. ಹರ್ಯಾಣ ಪರ ವಿಕಾಸ್‌ ಕಾಂಡೋಲ (14 ಅಂಕ) ರೈಡಿಂಗ್‌ನಿಂದ ಏಕೈಕ ಹೋರಾಟ ಪ್ರದರ್ಶಿಸಿದರು. ಹೀಗಾಗಿ ಸ್ಟೀಲರ್ ಟೈ ಸಾಧಿಸಲು ಸಾಧ್ಯವಾಯಿತು.

ಕನ್ನಡಿಗ ಸುಕೇಶ್‌ ಮಿಂಚು: ತಮಿಳ್‌ ತಲೈವಾಸ್‌ ಪರ ಕನ್ನಡಿಗ ಸುಕೇಶ್‌ ಹೆಗ್ಡೆ (7 ಅಂಕ) ರೈಡಿಂಗ್‌ ಮೂಲಕ ತಂಡಕ್ಕೆ ನೆರವಾದರು. ಉಳಿದಂತೆ ನಾಯಕ ಅಜಯ್‌ ಠಾಕೂರ್‌ (6 ಅಂಕ), ಮಂಜಿತ್‌ ಚಿಲ್ಲಾರ್‌ (4 ಅಂಕ) ಹಾಗೂ  ಜಸ್ವೀರ್‌ ಸಿಂಗ್‌ (4 ಅಂಕ) ಸಾಧಾರಣ ಹೋರಾಟ ಪ್ರದರ್ಶಿಸಲಷ್ಟೇ ಸಾಧ್ಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next