Advertisement

ತಂದೆ ಕೆಲಸ ನೋಡಿ ಮತ ನೀಡಿ : ಪ್ರಿಯಾಂಕಾ ಜಾರಕಿಹೊಳಿ

07:24 PM Apr 04, 2021 | Team Udayavani |

ಬೆಳಗಾವಿ : ದೂರದೃಷ್ಟಿ ಹಾಗೂ ಅಭಿವೃದ್ಧಿ ಪರ ಯೋಜನೆಗಳು ಮತ್ತು ಜನಪರ ಕಾರ್ಯಗಳು ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ತಂದೆ ಸತೀಶ ಜಾರಕಿಹೊಳಿ ಅವರ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಪ್ರಿಯಾಂಕಾ ಜಾರಕಿಹೊಳಿ ಆಶಾಭಾವನೆ ವ್ಯಕ್ತಪಡಿಸಿದರು.

Advertisement

ನಗರದ ಉಪ್ಪಾರ ಗಲ್ಲಿಯಲ್ಲಿ ಲೋಕಸಭಾ ಉಪಚುನಾವಣೆಯ ನಿಮಿತ್ತ ತಮ್ಮ ತಂದೆಯ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಮಾತುಗಿಂತ ಕೃತಿ ಮೇಲು ಎಂಬಂತೆ ಈಗಾಗಲೇ ತಮ್ಮ ತಂದೆಯವರು ನಗರದ ಜನತೆಗೆ ಮೂಲಭೂತ ಯೋಜನೆಗಳ ಅನುಷ್ಠಾನದೊಂದಿಗೆ ನೆಮ್ಮದಿಯ ಜೀವನಕ್ಕೆ ಕಾರಣೀಕರ್ತರಾಗಿದ್ದಾರೆ ಎಂದು ತಿಳಿಸಿದರು.

ನಗರದ ಹಿಂದಿನ ಇತಿಹಾಸವನ್ನು ನೆನಪಿಸಿಕೊಳ್ಳಿ, ಕುಡಿಯುವ ನೀರಿಗಾಗಿ ಪರದಾಟ, ತೆಗ್ಗು ಬಿದ್ದ ರಸ್ತೆಗಳು, ಶೌಚಾಲಯಗಳ ಕೊರತೆ, ಕತ್ತಲೆಯಲ್ಲಿದ್ದ ನಗರಕ್ಕೆ ವಿದ್ಯುತ್‌ ದೀಪಗಳು ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿ ಸುಂದರ ನಗರವನ್ನಾಗಿಸುವಲ್ಲಿ ನಮ್ಮ ಕುಟುಂಬದ ಪಾತ್ರ ಮಹತ್ವದ್ದಾಗಿದೆ ಎಂದ ಅವರು, ಇತ್ತೀಚೆಗೆ ನೆರೆ ಬಂದ ಹೋದ ಸಂದರ್ಭದಲ್ಲಿ ಹಾಗೂ ಕೋವಿಡ್‌-19 ಸಂದರ್ಭದಲ್ಲಿ ಅವರು ಮಾಡಿದ ಸಮಾಜಮುಖೀ ಕಾರ್ಯಗಳು ಗಮನಿಸಿ ತಂದೆಯವರನ್ನು ಲೋಕಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅರ್ಜುನ ಪವಾರ ಹಾಗೂ ಪ್ರಕಾಶ ಚಿಪ್ಪಲಕಟ್ಟಿ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಅಶೋಕ ಪಾಟೀಲ, ಕೆ.ಡಿ.ಕಲಾಲ, ಸಿದ್ದಲಿಂಗ ದಳವಾಯಿ, ನಗರಸಭೆ ಸದಸ್ಯ ಭಗವಂತ ಹುಳ್ಳಿ, ಮುಖಂಡರಾದ ವಿಠuಲ ಹೆಜ್ಜೆಗಾರ, ಮಾರುತಿ ಜಡಿನವರ, ಎಸ್‌.ಎಂ.ಹತ್ತಿಕಟಗಿ, ಕರೆಪ್ಪ ಬಡೆಪ್ಪಗೋಳ, ಲಕ್ಷ್ಮಣ ಬಬಲಿ, ಎಮ್‌.ಎ.ತಹಶೀಲದಾರ್‌, ವೈ.ಬಿ.ಪಾಟೀಲ, ವಿವೇಕ ಜತ್ತಿ ಸೇರಿದಂತೆ ಅನೇಕರು ಇದ್ದರು. ನಂತರ ಪ್ರಿಯಾಂಕಾ ಜಾರಕಿಹೊಳಿ ಅವರು, ಬೋಜಗಾರ ಗಲ್ಲಿ, ಡೋಹರ ಗಲ್ಲಿ, ಗರಡಿ ಗಲ್ಲಿ, ಮಾಲದಾರ ಗಲ್ಲಿಯಲ್ಲಿ ಪ್ರಚಾರ ನಡೆಸಿ ತಮ್ಮ ತಂದೆಯ ಪರವಾಗಿ ಮತಯಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next