Advertisement

ರಾಜ್ಯದ ಎಪಿಎಂಸಿಗಳ ಖಾಸಗೀಕರಣ ಕೃಷಿಕರಿಗೆ ಮಾರಕ: ಶಾಸಕ‌ ಪರಣ್ಣಮುನವಳ್ಳಿ

12:08 PM May 11, 2020 | keerthan |

ಗಂಗಾವತಿ: ರಾಜ್ಯದ ಎಪಿಎಂಸಿಗಳ ಖಾಸಗೀಕರಣ ಕೃಷಿಕರು ಸೇರಿ ಎಪಿಎಂಸಿ ಅವಲಂಬಿತರಿಗೆ ಮಾರಕವಾಗಲಿದ್ದು ಇದರ ಸಾಧಕಬಾಧಕ ಸಭೆ ನಡೆಸುವಂತೆ ಮುಖ್ಯಮಂತ್ರಿ ಮತ್ತು ಎಪಿಎಂಸಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ಅವರು ಸೋಮವಾರ ಎಪಿಎಂಸಿ ಪ್ರಾಂಗಣದಲ್ಲಿ 12ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸದ ಸಂದರ್ಭದಲ್ಲಿ ಹಮಾಲಿಕಾರ್ಮಿಕರು ಖಾಸಗೀಕರಣದ ಕುರಿತು ಎತ್ತಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ರಾಜ್ಯದ ಎಪಿಎಂಸಿಗಳಿಂದ ವಾರ್ಷಿಕ ಸುಮಾರು ಸಾವಿರ ಕೋಟಿ ಆದಾಯವಿದೆ. ಕೃಷಿಕರು ಹಮಾಲಿ ಕಾರ್ಮಿಕರು, ‌ವರ್ತಕರ ಶೋಷಣೆ ತಡೆಯಲು ಎಪಿಎಂಸಿ ಯಲ್ಲಿ ಅವಕಾಶವಿದ್ದು ಇದು ಖಾಸಗೀಕರಣಗೊಂಡರೆ ಎಪಿಎಂಸಿ ಗಳ ಅವಲಂಬಿತರ ಶೋಷಣೆ ಖಂಡಿತ ಆದ್ದರಿಂದ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುತ್ತದೆ ಎಂದರು.

ಕನಕಗಿರಿ ಶಾಸಕ ದಡೇಸೂಗೂರು ಬಸವರಾಜ ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಸೇರಿ‌ನಿರ್ದೇಶಕರು ಕಾರ್ಯದರ್ಶಿಗಳಿದ್ದರು

Advertisement

Udayavani is now on Telegram. Click here to join our channel and stay updated with the latest news.

Next